ಸಾಗರ ನ್ಯೂಸ್…

ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಸಾಗರದ ಈಡಿಗರ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಮಟ್ಟದ ನವ ಸಂಕಲ್ಪ ಚಿಂತನಾ ಶಿಬಿರ ಕಾರ್ಯಕ್ರಮ ನಡೆಯಿತು.

ಸಹಕಾರ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳ ಆಯ್ಕೆ ಆಗಲು ಅನುಸರಿಸಬೇಕಾದ ಸಂಘಟನೆಯ ನಿರ್ಧಾರಗಳು ಮತ್ತು ಸಹಕಾರ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ಮಾಡಬೇಕಾದ ಅಂಶಗಳು ಹಾಗೂ ಸ್ಥಳೀಯ ಮತ್ತು ರಾಜ್ಯಮಟ್ಟದ ಸಹಕಾರ ಸಂಸ್ಥೆಗಳಲ್ಲಿ ನಾಮಕರಣ ಅಗತ್ಯವೇ ಎಂದು ಮಂಜುನಾಥ್ ಗೌಡ ತಿಳಿಸಿದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರವನ್ನು ಕಾರ್ಮಿಕ ವಿಭಾಗ ರಚನೆ ಮಾಡುವುದು ಜೊತೆಗೆ ಸಂಘಟನೆಯಲ್ಲಿ ಸಕ್ರಿಯಗೊಳಿಸುವುದು ಸಹಕಾರ ಕ್ಷೇತ್ರದಿಂದ ರೈತರಿಗೆ ದೊರೆಯಬಹುದಾದ ಸೌಲಭ್ಯಗಳು ಮತ್ತು ಕಾಂಗ್ರೆಸ್ ಸರ್ಕಾರ ಇದ್ದಾಗ ದೊರೆತಿರುವ ಸೌಲಭ್ಯ ಸಹಕಾರಿ ರಥ ಯಾರಿಗೆ ಸಂಪೂರ್ಣ ಮಾಹಿತಿ ನೀಡಲು ಅನುಸರಿಸ ಬೇಕಾದ ಅಗತ್ಯ ಕ್ರಮಗಳ ಆಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜುನಾಥಗೌಡ ವಹಿಸಿದ್ದರು.ಸಂದರ್ಭದಲ್ಲಿ ಕೆ ಎಂ ಜಗದೀಶ್ ,ಹೆಚ್ ಎಲ್ ಷಡಕ್ಷರಿ, ಎಲ್ ರಾಮೇಗೌಡ, ಬಿ ಕೆ ಮೋಹನ್,ಎಸ್ಪಿ ಶೇಷಾದ್ರಿ, ಕೆ ರಂಗನಾಥ್, ಬಿ ಆರ್ ನಾಗರಾಜ್, ಪದ್ಮನಾಭ, ವೈ ಹೆಚ್ ನಾಗರಾಜ್ ಪ್ರಮೋದ್ ಎಂ ಕೆ, ವಿನಾಯಕ ಮೂರ್ತಿ, ಭದ್ರಾವತಿಗೋಪಿ, ಹಾಲುಗದ್ದೆ ಉಮೇಶ್ ಹಾಗೂ ಸಹಸ್ರಾರು ಸಹಕಾರಿ ಕ್ಷೇತ್ರದ ಪ್ರತಿನಿಧಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…