ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ
8ನೇ ಅಂತರ್‌ ರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಸಂಸದರಾದ ಬಿ .ವೈ. ರಾಘವೇಂದ್ರ ಅವರು ಭಾಗವಹಿಸಿದರು.

ಯೋಗವು ಮನಸ್ಸು, ದೇಹ ಮತ್ತು ಆತ್ಮಗಳನ್ನು ಶುದ್ದೀಕರಿಸಲು ನೆರವಾಗುತ್ತದೆ. ಅಲ್ಲದೆ ಪ್ರಕೃತಿಯ ನಡುವೆ ಅವಿನಾಭಾವ ಸಂಬಂಧ ಮೂಡಿಸುವ ಜೊತೆಗೆ ವಿಶ್ವದ ಜೊತೆಗೆ ಏಕತೆಯ ಸಂದೇಶವನ್ನು ಸಾರುತ್ತದೆ, ಯೋಗದ ಮೂಲಕ ದೈಹಿಕ ಮತ್ತು ಮಾನಸಿಕ ಆರೋಗ್ಯ ಪಡೆದುಕೊಳ್ಳೋಣ ಎಂದು ಸಂಸದರಾದ ಬಿ. ವೈ ರಾಘವೇಂದ್ರ ಅವರು ತಿಳಿಸಿದರು.

ಹಿರಿಯ ಯೋಗಪಟುಗಳಾದ ಡಾ.ಬಾ. ಸು ಅರವಿಂದ್, ಡಾ.ಡಾ.ಭ.ಮ. ಶ್ರೀಕಂಠ, ಮತ್ತು ಮಾಜಿ ಸಭಾಪತಿಗಳಾದ
ಡಾ. ಶಂಕರ ಮೂರ್ತಿ ಅವರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಅವದೂತ ಶ್ರೀ ವಿನಯ್ ಗುರೂಜಿ, ಮಾಜಿ ಸಚಿವರು, ಶಾಸಕರಾದ ಕೆ. ಎಸ್ ಈಶ್ವರಪ್ಪ ನವರು,ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯೋಗ ಶಿಕ್ಷಕರಾದ ಡಾ.ಭ.ಮ. ಶ್ರೀಕಂಠ ಅವರು ಡಾ ಯೋಗ ಶಿಕ್ಷಣ ಸಮಿತಿಯ ಅಧ್ಯಕ್ಷರಾದ || ಸಂಜಯ್ ಕುಮಾರ್ ಹೆಚ್.ವೈ. ಹಾಗೂ ಇನ್ನಿತರ ಮುಖಂಡರು ಯೋಗಾಭ್ಯಾಸಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…