ಸೊಳ್ಳೆಗಳಿಂದ ಹರಡುವ ರೋಗಗಳನ್ನು ನಿರ್ಲಕ್ಷಿಸಿದರೆ ಮಾರಣಾಂತಿಕವಾಗಬಹುದು, ಯಾವುದೇ ಜ್ವರವಿರಲಿ ಸರ್ಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಿ ರಕ್ತಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ ಎಂದು ಗುಡ್ಡದಪ್ಪ ಕಸಬಿ ಹೇಳಿದರು.

ಮನೆಯೊಳಗೆ ಹಾಗೂ ಮನೆಯ ಸುತ್ತ ಮುತ್ತ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಕೀಟಜನ್ಯ ರೋಗಗಳಿಂದ ರಕ್ಷಿಸಿಕೊಳ್ಳಿ ಎಂದು ಮಲೇರಿಯ ವಿರೋಧಿ ಮಾಸಾಚರಣೆ ಅಂಗವಾಗಿ ನಗರದ ಕಲ್ಲಹಳ್ಳಿ
ಹುಡ್ಕೋ ಕಾಲೋನಿಯ ಗುಡ್‌ಲಕ್ ಆರೈಕೆ ಕೇಂದ್ರದಲ್ಲಿ
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ
ಹಮ್ಮಿಕೊಳ್ಳಲಾಗಿದ್ದ ಹಿರಿಯ ನಾಗರಿಕರಿಗೆ ಸೊಳ್ಳೆಪರದೆ ವಿತರಿಸುವ ಕಾರ್ಯಕ್ರಮದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡದಪ್ಪ ಕಸಬಿ ತಿಳಿಸಿದರು.

ಪ್ರತಿವರ್ಷ ಲಕ್ಷಾಂತರ ಜನರು ಸೊಳ್ಳೆಗಳಿಂದ ಹರಡುವ
ಖಾಯಿಲೆಗಳಾದ ಮಲೇರಿಯ, ಡೆಂಗ್ಯೂ, ಚಿಕೂನ್‌ಗುನ್ಯ,ಮೆದುಳು ಜ್ವರ ಹಾಘೂ ಆನೆಕಾಲು ರೊಗಕ್ಕೆ ತುತ್ತಾಗುತ್ತಿದ್ದಾರೆ. ಶಿವಮೊಗ್ಗ ಜಲ್ಲೆಯಲ್ಲಿ ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ ೭ ಮಲೇರಿಯ, ೧೨೧ ಡೆಂಗ್ಯೂ, ಪ್ರಕರಣಗಳು ವರದಿಯಾಗಿವೆ. ಜೂನ್ ತಿಂಗಳಲ್ಲಿ ೫೧ ಪ್ರಕರಣಗಳು ವರದಿಯಾಗಿರುವುದು ಗಮನಿಸಬೇಕಾದ ಅಂಶವಾಗಿದೆ.

ಸೊಳ್ಳೆಗಳು ಮನೆಯ ಒಳಗೆ ಹಾಗೂ ಹೊರಗೆ
ಸಂಗ್ರಹವಾಗುವ ನೀರಿನಲ್ಲಿ ಉತ್ಪತ್ತಿಯಾಗುತ್ತವೆ.
ಮನೆಯೊಳಗೆ ರೆಪ್ರಿಜಿರೇಟರ್ ಕೆಳಗಿನ ಟ್ರೇ, ಹೂಕುಂಡಗಳ ಕೆಳಗಿನ ಪ್ಲೇಟ್, ಸಿಮೆಂಟ್ ತೊಟ್ಟಿಗಳು, ಡ್ರಮ್‌ಗಳು ಹಾಗೂ ಮನೆಯ ಹೊರಗಡೆ ಬಿಸಾಕಿದ ತೆಂಗಿನ ಚಿಪ್ಪುಗಳು, ಒಡೆದ ಪ್ಲಾಸ್ಟಿಕ್ ವಸ್ತುಗಳು, ಅನುಪಯುಕ್ತ ಟೈರ್‌ಗಳು, ಶೌಚಾಲಯದ ಬಳಿ ಹಾಗೂ ದನಕರುಗಳು ಕುಡಿಯಲು ನಿರ್ಮಿಸಿರುವ ಸಿಮೆಂಟ್ ತೊಟ್ಟಿಗಳಲ್ಲಿ, ಚರಂಡಿಯಲ್ಲಿ ನಿಂತ ನೀರಿನಲ್ಲಿ
ಸೊಳ್ಳೆಗಳು ಸಂತಾನೋತ್ಪತ್ತಿ ಹೊಂದುವುದರಿAದ ಸೊಳ್ಳೆಗಳ ಸಂತಾನೋತ್ಪತ್ತಿಗಳ ತಾಣಗಳ ನಿರ್ಮೂಲನೆಯಿಂದ ಮಾತ್ರ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಸಾಧ್ಯ,ಪ್ರತಿಯೊಬ್ಬ ಸಾರ್ವಜನಿಕರು ಮನೆಯೊಳಗಿನ ನೀರು
ಸಂಗ್ರಹಮಾಡುವ ಸಿಮೆಂಟ್ ತೊಟ್ಟಿ ಹಾಗೂ ಡ್ರಮ್‌ಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ, ಉಜ್ಜಿ ತೊಳೆದು, ಒಣಗಿಸಿ ಪುನಃ ನೀರನ್ನು ತುಂಬಬೇಕು.

ಸೊಳ್ಳೆಗಳು ಕೂರದಂತೆ ಮುಚ್ಚಿಡಬೇಕು. ಮೇಲೆ ತಿಳಿಸಿದ ನೀರಿನ ಸಂಗ್ರಹ ಮೂಲಗಳನ್ನು ವಾರದಲ್ಲಿ ಒಮ್ಮೆ ತಪ್ಪದೇ ಸ್ವಚ್ಛಗೊಳಿಸಬೇಕು.ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ಮುಂಜಾಗ್ರತೆವಹಿಸಬೇಕು
ಹಾಗೂ ಸಮರ್ಪಕವಾಗಿ ಘನತ್ಯಾಜ್ಯ ನಿರ್ವಹಣೆ ಮಾಡಬೇಕು, ಟೈರ್‌ಗಳಲ್ಲಿ ನೀರು ಸಂಗ್ರಹವಾಗದAತೆ ಮುಚ್ಚಿಡಬೇಕು ಎಂದು ಮಾಹಿತಿ ನೀಡಿದರು.
ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಪ್ರತಿ ತಿಂಗಳು
ಮನೆ ಭೇಟಿ ನೀಡಿ ರೋಗವಾಹಕ ಆಶ್ರಿತ ರೋಗಗಳ ಕುರಿತು ಮಾಹಿತಿ ನೀಡುವುದರ ಜೊತೆಗೆ ಸೊಳ್ಳೆ ಉತ್ಪತ್ತಿ ತಾಣಗಳ ಸಮೀಕ್ಷೆ ನಡೆಸುತ್ತಾರೆ ಈ ಸಂದರ್ಭದಲ್ಲಿ ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್ ಸಿ ಹೆಚ್ ಅಧಿಕಾರಿ ಡಾ.ನಾಗರಾಜ್ ನಾಯ್ಕ್ ಮಾತನಾಡಿ ಸೊಳ್ಳೆಗಳಿಂದ ಹರಡುವ ಖಾಯಿಲೆಗಳಿಂದ ಮುಕ್ತಿ ಪಡೆಯಲು ಪ್ರತಿಯೊಬ್ಬರೂ ವೈಯಕ್ತಿಕ ಸುರಕ್ಷತೆಗಾಗಿ ಸೊಳ್ಳೆ ಪರದೆ ಉಪಯೋಗಿಸಿವುದನ್ನು ರೂಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗುಡ್‌ಲಕ್ ಆರೈಕೆ ಕೇಂದ್ರದ
ನಿರ್ದೇಶಕರಾದ ಜಿ ವಿಜಯಕುಮಾರ್, ರವೀಂದ್ರನಾಥ್ ಐತಾಳ್, ಶಿವಪ್ಪ, ಪಂಚಾಕ್ಷರಯ್ಯ ಹಾಗೂ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರನಾಧಿಕಾರಿಗಳ ಕಛೇರಿಯ ಉಮೇಶ್,
ಶಶಿಕುಮಾರ್ ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…