ಶಿವಮೊಗ್ಗದ ಸಹ್ಯಾದ್ರಿ ಪ್ರೌಡಶಾಲೆ ಆವರಣದಲ್ಲಿ ಶಿವಮೊಗ್ಗ ಹೆಲ್ಪ್ಪಪಿಂಗ್ ಹ್ಯಾಂಡ್ಸ್ ಮೂಲಕ ಅಭಿರುಚಿ ಮತ್ತು ಮಹಾತ್ಮಗಾಂಧಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಪತ್ರಿಕೆ ಹಂಚುವ ಹುಡುಗರಿಗೆ ಮತ್ತು ಪತ್ರಿಕಾ ಏಜೆಂಟರಿಗೆ ದಿನಸಿ ಪದಾರ್ಥಗಳ ಕಿಟ್ ಗಳನ್ನ ಹಾಗೂ ಆರೋಗ್ಯದ ಕಿಟ್ ಗಳನ್ನ ವಿತರಿಸಿದರು. ಕಾರ್ಯಕ್ರಮಕ್ಕೆ ಅಭಿರುಚಿ ಸಂಸ್ಥೆಯ ಅಧ್ಯಕ್ಷರೂ ಮತ್ತು ಪ್ರಖ್ಯಾತ ವೈದ್ಯರಾದ ಡಾಕ್ಟರ್. ಶಿವರಾಮ್ ಕೃಷ್ಣ ರವರು ಚಾಲನೆ ನೀಡಿ ಮಾತನಾಡುತ್ತಾ ಕರೋನಾ ವಾನ್ನು ನಿಯಂತ್ರಿಸಲು ಸಂಘ ಸಂಸ್ಥೆಗಳ ಒಗ್ಗಟ್ಟಿನ ಪ್ರಯತ್ನದ ಭಾಗವಾಗಿ ಶಿವಮೊಗ್ಗ Helping Hands ರಚನೆಯಾಗಿ ಜಿಲ್ಲಾದ್ಯಂತ ಕಾರ್ಯನಿರ್ವಹಿಸುತ್ತಿದೆ ಎಂದರು. ಶ್ರೀ ಕೆ.ಸಿ.ಬಸವರಾಜ್ ರವರು ಪತ್ರಿಕೆಗಳ ವಿತರಣೆ ಮಾಡುವ ಶಿವಮೊಗ್ಗದ ಹುಡುಗರಿಗೆ ಮತ್ತು ಪತ್ರಿಕಾ ಏಜೆಂಟರಿಗೆ ದಿನಸಿ ಕಿಟ್ ಗಳನ್ನಾ ವಿತರಿಸಿ ಮಾತನಾಡಿ ಕಳೆದ 2 ತಿಂಗಳಿಂದ ಶಿವಮೊಗ್ಗ ಜಿಲ್ಲೆಯ ಸಂಘ ಸಂಸ್ಥೆಗಳನ್ನು ಒಗ್ಗೂಡಿಸಿ ಕೊಂಡು ಶಿವಮೊಗ್ಗ Helping Hands ವೇದಿಕೆ ಮೂಲಕ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಿದ್ದು, 3 ನೆಯ ಅಲೆಯನ್ನು ಹಿಮ್ಮೆಟ್ಟಿಸಲು ಅದರ ಮೂಲಕ ಮಕ್ಕಳ ಸಂರಕ್ಷಣೆಗೆ ಶ್ರಮಿಸಲು ಎಲ್ಲರೂ ಶಿವಮೊಗ್ಗ Helping Hands ಜತೆಗೆ ಕೈ ಜೋಡಿಸಬೇಕು ಎಂದು ಕೋರಿದರು.

ಈ ಸಂದರ್ಭದಲ್ಲಿ ರೋಟರಿ ವಿಜಯಕುಮಾರ್ , ಡಾಕ್ಟರ್. ಕೆ.ಆರ್. ಶ್ರೀಧರ್ ರವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ದರು. ಈ ಸಂದರ್ಭದಲ್ಲಿ ಯೂತ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ದ ನಿರ್ದೇಶಕರಾದ ಶ್ರೀ ದಿಲೀಪ್ ನಾಡಿಗ್, ಅಭಿರುಚಿಯ ಶ್ರೀ ಕುಮಾರ್ ಶಾಸ್ತ್ರಿ, ಮಹಾತ್ಮಾಗಾಂಧಿ ಗ್ರಾಮೀಣ ಅಭಿವೃದ್ದಿ ಮತ್ತು ಸಮಾಜ ಪರಿವರ್ತನ ಟ್ರಸ್ಟ್ ನ ಶ್ರೀ ಬಸವನಗೌಡ, ಶ್ರೀನಿಧಿ, ನವೀನ್,ಮುಂತಾದವರು ಉಪಸ್ಥಿತರಿದ್ದರು .

ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153