ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು, ಕೆಂದಾಳಬೈಲು, ತೀರ್ಥಹಳ್ಳಿ ತಾ,ನ ಶಾಲೆಯಲ್ಲಿ ವೈದ್ಯರ ದಿನದ ಪ್ರಯುಕ್ತ ಹೊನ್ನೇತಾಳು ಸರ್ಕಾರಿ ಶಾಲಾ ಮಕ್ಕಳಿಗೆ ಹಾಗೂ ಪೋಷಕರಿಗೆ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ಹಾಗೂ ತಾಲ್ಲೂಕಾ ವೈದ್ಯಕೀಯ ಪ್ರಕೋಷ್ಠ ತೀರ್ಥಹಳ್ಳಿ, ಜೆ.ಸಿ.ಐ ಶಿವಮೊಗ್ಗ ಶರಾವತಿ, ತಲಾರಿ ಲ್ಯಾಬ್ ಶಿವಮೊಗ್ಗ, ತಾಯಿಮನೆ ಫೌಂಡೇಶನ್ ಶಿವಮೊಗ್ಗ, ಅಧ್ಯಕ್ಷರು,ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೊನ್ನೇತಾಳು ನ ಮುಖ್ಯ ಶಿಕ್ಷಕರು, ಸಿಬ್ಬಂದಿ ಮತ್ತು ಸದಸ್ಯರು SDMC, ಅಧ್ಯಕ್ಷರು ಮತ್ತು ಸದಸ್ಯರು , ಗ್ರಾಮ ಪಂಚಾಯತಿ ಹೊನ್ನೇತಾಳು ‌, ಮತ್ತು ಆರಕ್ಷಕ ಠಾಣೆ ಆಗುಂಬೆ. ಇವರೆಲ್ಲರ ಸಹಯೋಗದಲ್ಲಿ ಉಚಿತ ದಂತ ವೈದ್ಯಕೀಯ ಮತ್ತು ಮಕ್ಕಳ ತಜ್ಞರ ತಪಾಸಣಾ ಶಿಬಿರ, ರಕ್ತದ ಗುಂಪು ತಪಾಸಣೆ ಹಾಗೂ ರಕ್ತದಾನ ಶಿಬಿರ.

ಭಾನುವಾರ ಬೆಳಿಗ್ಗೆ 10 ಗಂಟೆಗೆ ವೈದ್ಯಕೀಯ ಶಿಬಿರ ಯಶಸ್ವಿಯಾಗಿ ಜರುಗಿತು, ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಪೋಷಕರು ಆರೋಗ್ಯ ತಪಾಸಣಾ ಶಿಬಿರದಲ್ಲಿ ಭಾಗಿಯಾಗಿದ್ದರು. ಶ್ರೀ ಶಾಂತವೀರ್, ಡಿ.ವೈ.ಎಸ್.ಪಿ , ತೀರ್ಥಹಳ್ಳಿ. ಅವರು ರಕ್ತದಾನ ಮಾಡುವ ಮೂಲಕ ರಕ್ತದಾನ ಶಿಬಿರ ಉದ್ಘಾಟನೆ ಮಾಡಿದರು, ಪೊಲೀಸ್ ಇಲಾಖೆ ಮಹಿಳಾ ಸಿಬ್ಬಂದಿಗಳು ರಕ್ತದಾನ ಮಾಡಿದ್ದು ಶಿಬಿರದ ವಿಶೇಷವಾಗಿತ್ತು.
ಶಿಬಿರಕ್ಕೆ ಆಗಮಿಸುವ ವೈದ್ಯಕೀಯ ಹಾಗೂ ಕಾರ್ಯಕ್ರಮ ಆಯೋಜನೆ ತಂಡದ ಪ್ರಮುಖರು ಡಾ.ಹೇಮಂತ್ ಕೆ ಜೆ ಸಂಚಾಲಕರು, ಜಿಲ್ಲಾ ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ಡಾ.ಸುರೇಶ್ ದಂತ ವೈದ್ಯ ತಜ್ಞರು.

ವೈದ್ಯಕೀಯ ಪ್ರಕೋಷ್ಠ ಕರ್ನಾಟಕ ರಾಜ್ಯ ಸಮಿತಿಯ ಸದಸ್ಯರು. ಡಾ.ಶ್ರೀನಿವಾಸ್ ರೆಡ್ಡಿ ಸಹ ಸಂಚಾಲಕರು, ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ, ಡಾ.ನಂದ ಕಿಶೋರ್ ದಂತ ವೈದ್ಯ ತಜ್ಞರು ಸಂಚಾಲಕರು , ವೈದ್ಯಕೀಯ ಪ್ರಕೋಷ್ಠ ತೀರ್ಥಹಳ್ಳಿ , ಡಾ. ಗೌತಮ್ ದಂತ ವೈದ್ಯ ತಜ್ಞರು ಸಂಚಾಲಕರು ,ವೈದ್ಯಕೀಯ ಪ್ರಕೋಷ್ಠ ಶಿವಮೊಗ್ಗ ನಗರ, ಡಾ. ವಿನಯ್ ಹೆಗ್ಡೆ, ಮಕ್ಕಳ ತಜ್ಞರು , ಅಶೋಕ ಸಂಜೀವಿನಿ ಆಸ್ಪತ್ರೆ ಶಿವಮೊಗ್ಗ, ಶ್ರೀಯುತ ಹನುಮಂತ್ ಆಡಳಿತಾಧಿಕಾರಿಗಳು ರಕ್ತನಿಧಿ, ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಶಿವಮೊಗ್ಗ.
JCI ಸೌಮ್ಯ ಅರಳಪ್ಪ, ಅಧ್ಯಕ್ಷರು ಜೆಸಿಐ ಶಿವಮೊಗ್ಗ ಶರಾವತಿ. ಶ್ರೀ ನವೀನ್ ತಲಾರಿ, ಪ್ರಯೋಗಾಲಯ ತಜ್ಞರು ತಲಾರಿ ಲ್ಯಾಬ್ ಶಿವಮೊಗ್ಗ. ಶ್ರೀ ಸುದರ್ಶನ್, ಅಧ್ಯಕ್ಷರು ತಾಯಿಮನೆ ಫೌಂಡೇಶನ್, ಶಿವಮೊಗ್ಗ. ಹಾಗೂ ಜೆ ಸಿ ಐ ಶಿವಮೊಗ್ಗ ಶರಾವತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…