ಶಿವಮೊಗ್ಗ: ನಗರದ ಅಮೀರ್ ಅಹಮ್ಮದ್ ಕಾಲೋನಿಯ 3 ನೇ ತಿರುವಿನಲ್ಲಿ ಮಳೆಯಿಂದಾಗಿ ಮುಬಿನಾಬಾನು ಎಂಬುವರ ಮನೆ ಗೋಡೆ ಕುಸಿದಿದೆ. ಉಳಿದ ಗೋಡೆಗಳು ಬಿರುಕುಬಿಟ್ಟಿದ್ದು, ಅಪಾಯಕಾರಿ ಸ್ಥಿತಿಯಲ್ಲಿದೆ. ಕೊಳಚೆ ನಿರ್ಮೂಲನಾ ಮಂಡಳಿಯಿಂದ ಹಕ್ಕುಪತ್ರ ದೊರೆತಿದ್ದು, ಈ ಮನೆಯಲ್ಲಿ 9 ಜನ ವಾಸ ಮಾಡುತ್ತಿದ್ದಾರೆ. ಕೂಡಲೇ ಸರ್ಕಾರ ಆರ್ಥಿಕ ನೆರವು ನೀಡಿ ಸ್ಪಂದಿಸಬೇಕೆಂದು ಮುಬಿನಾಬಾನು ಮನವಿ ಮಾಡಿದ್ದಾರೆ.

ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಕಂದಾಯಾಧಿಕಾರಿಗಳು ಕೂಡಲೇ ಬೇರೆ ಮನೆಗೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಆದರೆ, ಬಾಡಿಗೆ ಮನೆಗೆ ಹೋಗುವಷ್ಟು ಚೈತನ್ಯ ನಮ್ಮಲ್ಲಿಲ್ಲ. ಸ್ಥಳಕ್ಕೆ ಪಾಲಿಕೆ ಸದಸ್ಯ ರಮೇಶ್ ಹೆಗ್ಡೆ ಕೂಡ ಭೇಟಿ ನೀಡಿದ್ದು, ಸರ್ಕಾರದಿಂದ ಕೂಡಲೇ ನೆರವು ನೀಡಬೇಕೆಂದು ಆಗ್ರಹಿಸಿದ್ದಾರೆ.

ವರದಿ ಮಂಜುನಾಥ್ ಶೆಟ್ಟಿ…