ಆಯನೂರು ನ್ಯೂಸ್…

ಶಿವಮೊಗ್ಗ ತಾಲ್ಲೂಕಿನ ಆಯನೂರು ವಿಭಾಗದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿಶೇಷಚೇತನರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಿವಮೊಗ್ಗ ಜಿಲ್ಲಾ ಘಟಕ ಸಕ್ಷಮ ಮತ್ತು ಆರೋಗ್ಯ ಭಾರತಿ ಶಿವಮೊಗ್ಗದ ವತಿಯಿಂದ ಹಾಗೂ ಸಂಸ್ಕಾರ ಪ್ರತಿಷ್ಠಾನ ಶಿವಮೊಗ್ಗ, ವಿಶ್ವಭಾರತಿ ಮಹಿಳಾ ಸ್ವಸಹಾಯ ಸಂಘ ಶಿವಮೊಗ್ಗ, ಶ್ರೀ ಸುಬ್ಬಯ್ಯ ದಂತ ಕಾಲೇಜು ಶಿವಮೊಗ್ಗ ಇವರ ಸಹಯೋಗದಲ್ಲಿ ನಡೆಸಲಾಯಿತು.

ಈ ಶಿಬಿರದಲ್ಲಿ ಆಯನೂರು ಗ್ರಾಮ ಪಂಚಾಯಿತಿ, ಕೋ ಹಳ್ಳಿ ಆಯನೂರು ಗ್ರಾಮ ಪಂಚಾಯಿತಿ, ಸಿರಿಗೆರೆ ಗ್ರಾಮ ಪಂಚಾಯಿತಿ, ಹಾರನಹಳ್ಳಿ ಗ್ರಾಮ ಪಂಚಾಯಿತಿ ಹಾಗೂ ತುಪ್ಪೂರು ಗ್ರಾಮ ಪಂಚಾಯಿತಿ ಒಟ್ಟು 5 ಗ್ರಾಮ ಪಂಚಾಯಿತಿಯಿಂದ ವಿಶೇಷಚೇತನರು ಪಾಲಗೊಂಡಿದ್ದರು.ಈ ಕಾರ್ಯಕ್ರಮವನ್ನು ಅದೇ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ 25 ಸಸಿಗಳನ್ನು ನೆಡುವುದರ ಮೂಲಕ ಈ ಶಿಬಿರವನ್ನು ಚಾಲನೆ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ
ಡಾ.ಶಿಲ್ಪಾ ಆಡಳಿತ ವೈದ್ಯರು ಆಯನೂರು.
ಕುಮಾರಶಾಸ್ತ್ರಿ ಕಾರ್ಯದರ್ಶಿ ಸಕ್ಷಮ, ಸಿ ಆರ್ ಶಿವಕುಮಾರ್ ಜಿಲ್ಲಾ ಸಂಚಾಲಕರು ಸಕ್ಷಮ. ಶಿವಮೊಗ್ಗ,
ಶ್ರೀಧರ್ ಆರೋಗ್ಯ ಭಾರತಿ, ಸುಬ್ಬಯ್ಯ ದಂತ ಕಾಲೇಜಿನ ವೈದ್ಯರು,ಯುವ ಸಕ್ಷಮ ದ ಪದಾಧಿಕಾರಿಗಳು ಭಾಗವಹಿಸಿದ್ದರು.

ವರದಿ ಮಂಜುನಾಥ್ ಶೆಟ್ಟಿ…