ಹೊಸನಗರ ನ್ಯೂಸ್…

ಹೊಸನಗರ ತಾಲೂಕು ನಗರ ಠಾಣಾ ವ್ಯಾಪ್ತಿಯ ಹೊಸಗೆರೆ ಮಠ, ಮತ್ತಿಕೈ ಗ್ರಾಮದ ವಾಸಿ ಸತೀಶ್, 27 ವರ್ಷ ಮತ್ತು ತಂದೆ ನಾರಾಯಣ, 45 ವರ್ಷ ರವರು ಬಂಟೋಡಿಯ ವಾಸಿ ಮೋಹನ್ ರವರ ಜಮೀನಿನ ಹತ್ತಿರ ನಡೆದುಕೊಂಡು ಹೋಗುತ್ತಿರುವಾಗ ಮೋಹನ ಮತ್ತು ಆತನ ಮಗ ಚಂದ್ರಶೇಖರ ರವರು ಸೇರಿಕೊಂಡು ಹಣದ ವಿಚಾರದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಜಾತಿ ನಿಂದನೆ ಮಾಡಿ, ಕತ್ತಿಯಿಂದ ಸತೀಶ್ ರವರ ತಲೆಗೆ ಮಾರಣಾಂತಿಕ ಹಲ್ಲೆ ಮಾಡಿರುತ್ತಾರೆ.

ದೂರಿನ ಮೇರೆಗೆ ಗುನ್ನೆ ಸಂಖ್ಯೆ 0001/2015 ಕಲಂ 307 ಐಪಿಸಿ ಮತ್ತು ಎಸ್.ಸಿ ಎಸ್.ಟಿ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ.

ತನಿಖಾಧಿಕಾರಿಗಳಾದ ಶ್ರೀ ರಾಮಚಂದ್ರ ನಾಯ್ಕ್, ಡಿವೈಎಸ್.ಪಿ ತೀರ್ಥಹಳ್ಳಿರವರು ಪ್ರಕರಣದ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರವನ್ನು ಸಲ್ಲಿಸಿರುತ್ತಾರೆ.

ಶ್ರೀಮತಿ ಪುಷ್ಪ, ಸರ್ಕಾರಿ ಅಭಿಯೋಜಕರವರು ಪ್ರಕರಣದ ವಾದ ಮಂಡಿಸಿದ್ದು, 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗದಲ್ಲಿ ಪ್ರಕರಣದ ವಿಚಾರಣೆ ನಡೆದು ಮಾನ್ಯ ನ್ಯಾಯಧೀಶರಾದ ಶ್ರೀಮತಿ ಬಿ.ಆರ್ ಪಲ್ಲವಿ ರವರು ದಿನಾಂಕಃ- 13-07-2022 ರಂದು ಮೋಹನ್, 44 ವರ್ಷ, ಬಂಟೋಡಿ, ಕಟ್ಟಿನಹೊಳೆ, ಹೊಸನಗರ ಶಿವಮೊಗ್ಗ ಈತನ ವಿರುದ್ಧ ಕಲಂ 307 ಐಪಿಸಿ ಅಡಿಯಲ್ಲಿ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ 03 ವರ್ಷ 06 ತಿಳಗಳ ಕಾಲ ಸಾಧಾರಣ ಕಾರಾವಾಸ ಶಿಕ್ಷೆ ಮತ್ತು 3,000/- ರೂ ದಂಡ, ದಂಡವನ್ನು ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ 03 ತಿಂಗಳ ಕಾಲ ಸಾದಾ ಕಾರವಾಸ ಶಿಕ್ಷೆ ನೀಡಿ ಆದೇಶ ನೀಡಿರುತ್ತಾರೆ.

ವರದಿ ಮಂಜುನಾಥ್ ಶೆಟ್ಟಿ…