ಶಿವಮೊಗ್ಗ ನಗರದ ಅಕ್ಕಪಕ್ಕದಲ್ಲೇ ಇರುವ ತುಪ್ಪುರು ಮತ್ತು ಉಪ ಗ್ರಾಮಗಳು ಸನಿವಾಸ , ಜಟ್ಟಿಸರ, ಗಡ್ಡೆಮನೆ , ಹೊರಬೈಲು , ಚೋಡನಾಳ, ಬ್ಯಾಡನಾಳ, ಗೋಣಿ ಜಡ್ಡು, ಗ್ರಾಮಗಳಿಂದ ಶಿವಮೊಗ್ಗ ನಗರಕ್ಕೆ ವಿದ್ಯಾಭ್ಯಾಸಕೆಂದು ಬರುವ ಬಸ್ ಪಾಸ್ ಹೊಂದಿರುವ ವಿದ್ಯಾರ್ಥಿಗಳಿಗೆ ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು ನಿಲ್ಲಿಸದೆ ಇರುವುದರಿಂದ ಸುಮಾರು 150 ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ.

ಬಸ್ಸಿನಲ್ಲಿ ಇಲ್ಲದೆ ಇರುವ ನಿಮಗಳನ್ನು ತಂದು ಬಸ್ಸಿನ ನಿರ್ವಾಹಕರು ಅವಾಚ್ಯವಾಗಿ ವಿದ್ಯಾರ್ಥಿಗಳಿಗೆ ಮಾತನಾಡುತ್ತಿರುವುದನ್ನು ಪ್ರಶ್ನಿಸಿ ಹಲವು ಬಾರಿ ದೂರಗಳನ್ನು ನೀದಿದ್ದರೂ ಸಹ ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದೆ ಇದ್ದುದರಿಂದ ಅಧಿಕಾರಿಗಳ ಬೇಜವಾಬ್ದಾರಿತನವನ್ನು ಖಂಡಿಸಿ ಇಂದು ಕೆ ಆರ್ ಎಸ್ ಪಕ್ಷ ದ ಶಿವಮೊಗ್ಗ ಜಿಲ್ಲಾ ಯುವಘಟಕದ ಅಧ್ಯಕ್ಷರಾಗಿರುವ ಮಧು ಬಿಆರ್ ಅವರ ನೇತೃತ್ವದಲ್ಲಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು.

ವರದಿ ಮಂಜುನಾಥ್ ಶೆಟ್ಟಿ…