ದೊಡ್ಡಪೇಟೆ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳು ಠಾಣಾ ವ್ಯಾಪ್ತಿಯಲ್ಲಿ ಗಸ್ತಿನಲ್ಲಿದ್ದಾಗ ಇಬ್ಬರು ಅರಸ್ ವೆಜ್ ಹೋಟೆಲ್ ನ ಹತ್ತಿರ ಕಳ್ಳತನ ಮಾಡಿ ತಂದ ಮೊಬೈಲ್ ಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂದು ಬಂದ ಖಚಿತ ಮಾಹಿತಿಯ ಮೇರೆಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ.

ಮೊಬೈಲ್ ಮಾರಾಟ ಮಾಡುತ್ತಿದ್ದ 1)ಜುನೈದ್ ಶೇಖ್ @ ಮಹಮ್ಮದ್ ಜುನೈದ್, 19 ವರ್ಷ, ಆರ್.ಎಂ.ಎಲ್ ನಗರ ಶಿವಮೊಗ್ಗ ಮತ್ತು 2)ಮಹಮ್ಮದ್ ಖಲಂದರ್, 19 ವರ್ಷ, ಮೇಲನ ತುಂಗಾನಗರ, ಶಿವಮೊಗ್ಗ ರವರುಗಳನ್ನು ವಶಕ್ಕೆ ಪಡೆದು, ವಿಚಾರಣೆ ಮಾಡಿದಾಗ ಕಡೂರು ಸಂತೇ ಮಾರ್ಕೇಟ್ ಜನ ಸಂದಣಿ ಪ್ರದೇಶ ಗಳಲ್ಲಿ ಸದರಿ ಮೊಬೈಲ್ ಫೋನ್ ಗಳನ್ನು ಕಳ್ಳತನ ಮಾಡಿಕೊಂಡು ತಂದಿರುತ್ತೇವೆಂದು ತಿಳಿಸಿರುತ್ತಾರೆ. ನಂತರ ಆರೋಪಿತರಿಂದ ಅಂದಾಜು ಮೌಲ್ಯ 45,000/- ರೂ ಗಳ ವಿವಿಧ ಕಂಪನಿಯ 09 ಮೊಬೈಲ್ ಫೋನ್ ಗಳನ್ನು ಅಮಾನತ್ತು ಪಡಿಸಿಕೊಂಡು ಗುನ್ನೆ ಸಂಖ್ಯೆ 0296/2022 ಕಲಂ 41 (ಡಿ), 102 ಸಿಆರ್ ಪಿಸಿ, 379 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದೆ.

ವರದಿ ಮಂಜುನಾಥ್ ಶೆಟ್ಟಿ…