ಶಿವಮೊಗ್ಗ ಕಾಂಗ್ರೆಸ್ ಭವನದಲ್ಲಿ 62ನೇ ಯುವ ಕಾಂಗ್ರೆಸ್ ನ ಸಂಸ್ಥಾಪನ ದಿನದ ಅಂಗವಾಗಿ ಇಂದು ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ನಿಂದ ಯುವ ಕಾಂಗ್ರೆಸ್ ಧ್ವಜಾರೋಹಣ ಕಾರ್ಯಕ್ರಮವನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ನೆರವೇರಿಸಿದರು.

ನಂತರ ಮಾತನಾಡಿದ ಅವರು” ಯುವಕರ ಶಕ್ತಿ ದೇಶದ ಶಕ್ತಿ” ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ಯುವ ಕಾಂಗ್ರೆಸ್ನ ಪಾತ್ರ ಪ್ರಮುಖವಾಗಿದೆ ಶಿವಮೊಗ್ಗ ಜಿಲ್ಲೆಯಲ್ಲೂ ಸಹ ಯುವ ಕಾಂಗ್ರೆಸ್ ಸಕ್ರಿಯವಾಗಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಇಂದು ತಿಳಿಸಿ ಎಲ್ಲ ಶಿವಮೊಗ್ಗ ಜಿಲ್ಲೆಯ ಯುವ ಕಾಂಗ್ರೆಸ್ ಮಿತ್ರರಿಗೆ ಯುವ ಕಾಂಗ್ರೆಸ್ ಸಂಸ್ಥಾಪನ ದಿನಾಚರಣೆಯ ಶುಭಾಶಯಗಳು ಕೋರಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ. ಗಿರೀಶ್, ಜಿಲ್ಲಾ ಕಾಂಗ್ರೆಸ್ನ ಪ್ರಧಾನ ಕಾರ್ಯದರ್ಶಿ ಕೆ ರಂಗನಾಥ್, ಉತ್ತರ ಬ್ಲಾಕ್ ಯುವ ಕಾಂಗ್ರೆಸ್ ನ ಅಧ್ಯಕ್ಷ ಬಿ ಲೋಕೇಶ್, ಜಿಲ್ಲಾ ಯುವ ಕಾಂಗ್ರೆಸ್ ನ ಪ್ರಧಾನ ಕಾರ್ಯದರ್ಶಿಗಳಾದ ಎಂ ರಾಹುಲ್, ಗಗನ್ ಗೌಡ, ಎಂ ರಾಕೇಶ್, ಪುಷ್ಪಕ್ ಕುಮಾರ್ ,ಕೆ ಎಲ್ ಪವನ್, ಸೈಯದ್ ಜಮೀಲ್ , ಚಿನ್ಮಯ್ ಜಿಲ್ಲಾ ಕಾಂಗ್ರೆಸ್ನ ಮುಖಂಡರುಗಳಾದ ಚಂದ್ರ ಭೂಪಾಲ್ , ಶಿವಾನಂದ್ , ನವುಲೆ ಶ್ರೀಧರ್ ಮೂರ್ತಿ, ವೈ ಎಚ್ ನಾಗರಾಜ್ ,ಚಂದ್ರಶೇಖರ್ ,ಜ್ಯೋತಿ ಅರಳಪ್ಪ , ರಮೇಶ್ ಶಂಕರಘಟ್ಟ ನೇತಾಜಿ ಇಕ್ಬಾಲ್ , ಕಾಂಗ್ರೆಸ್ ಪಕ್ಷದ ಮಹಿಳಾ ಮುಖಂಡರುಗಳಾದ ಜಿ ಪಲ್ಲವಿ, ಸ್ಟೆಲ್ಲಾ ಮಾರ್ಟಿನ್ ,ಸುವರ್ಣ ನಾಗರಾಜ್, ಹಾಗೂ ಯುವ ಕಾಂಗ್ರೆಸ್ನ ಬ್ಲಾಕ್ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ ಮಂಜುನಾಥ್ ಶೆಟ್ಟಿ…