ಶಿವಮೊಗ್ಗ: ಬಿಜೆಪಿ ನಗರ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ಅಂಗವಾಗಿ ಡಾ. ವಿಕ್ರಮ್ ಆಮಟೆ, ಡಿವೈಎಸ್ಪಿ ಬಾಲರಾಜ್, ಹಾಗೂ ಆರಕ್ಷಕ ಸಿಬ್ಬಂದಿಗೆ ರಾಖಿ ಕಟ್ಟಿ ಶುಭ ಹಾರೈಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ವಿದ್ಯಾ ಲಕ್ಷ್ಮಿಪತಿ, ನಗರ ಅಧ್ಯಕ್ಷೆ ಸುರೇಖಾ ಮುರಳೀಧರ್, ಪಾಲಿಕೆ ಸದಸ್ಯರಾದ ಸುವರ್ಣಾ ಶಂಕರ್, ಆರತಿ ಆ.ಮ. ಪ್ರಕಾಶ್, ಪದಾಧಿಕಾರಿಗಳಾದ ಯಶೋದಾ, ರಶ್ಮಿ ಶ್ರೀನಿವಾಸ್, ಮೀನಾಕ್ಷಮ್ಮ, ಸುಮಾ ಭೂಪಾಳಂ, ಪ್ರತಿಮಾ, ಉಷಾ ಉತ್ತಪ್ಪ, ಸುನಿತಾ, ಅನಿಲಾ, ಗೀತಾ, ಉಮಾ ಮೂರ್ತಿ ಮೊದಲಾದವರಿದ್ದರು.

ವರದಿ ಮಂಜುನಾಥ್ ಶೆಟ್ಟಿ…