ತಾಲೂಕಿನಾದ್ಯಂತ ಆಗಸ್ಟ್ 23ರ ಬೆಳಗ್ಗೆ 6ಗಂಟೆಯ ವರೆಗೆ 144 ಸೆಕ್ಷನ್ ವಿಸ್ತರಣೆ ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆದೇಶ ಹೊರಡಿಸಿದ್ದಾರೆ.

ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಜಿಲ್ಲಾಧಿಕಾರಿ ಈ ಆದೇಶದ ಹೊರಡಿಸಿದ್ದಾರೆ. ಸೆಕ್ಷನ್ ಹಿನ್ನೆಲೆ 5 ಜನರಿಗಿಂತ ಹೆಚ್ಚು ಜನ ಸೇರುವಂತಿಲ್ಲ , ಯಾವುದೇ ಸಭೆ ಸಮಾರಂಭ ಪ್ರತಿಭಟನೆ ನಡೆಸುವುದು ನಿಷೇಧಿಸಲಾಗಿದೆ. ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಇಟ್ಕೊಂಡು ಓಡಾಡುವಂತಿಲ್ಲ. ಎಲ್ಲಾ ಅಂಗಡಿ ಮುಂಗಟ್ಟುಗಳನ್ನು 9 ಗಂಟೆಯ ನಂತರ ಕ್ಲೋಸ್ ಮಾಡಲು ಸೂಚಿಸಿದ್ದಾರೆ. ಚಿತ್ರಮಂದಿರದ 10 ಗಂಟೆಯ ನಂತರ ಪ್ರದರ್ಶನಗಳು ರದ್ದುಗೊಳಿಸಿದ್ದಾರೆ.

ವರದಿ ಪ್ರಜಾಶಕ್ತಿ…