ಶಿವಮೊಗ್ಗ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್ ಸಿ ಯೋಗೇಶ್ ರವರ ಹುಟ್ಟು ಹಬ್ಬದ ಅಂಗವಾಗಿ ದುರ್ಗಿಗುಡಿ ಶಾಲೆಯಲ್ಲಿ ಮಕ್ಕಳಿಗೆ ಪರಿಸರ ಸ್ನೇಹಿ ಪೆನ್ಸಿಲ್ ವಿತರಿಸಿದರು.

ವಿಶೇಷತೆ ಎಂದರೆ ಪೆನ್ಸಿಲ್ ಅನ್ನು ಬಳಸಿ ಮುಗಿತ ನಂತರ ಇದರ ಕೊನೆಯ ತುದಿಯಲ್ಲಿ ಮನೆಯ ಅಂಗಳದಲ್ಲೇ ಬೆಳೆಯಬಹುದಾದಂತಹ ಟೊಮೆಟೊ ಕೊತ್ತಂಬರಿ, ಕರಿಬೇವು, ಮೆಣಸಿನಕಾಯಿ ಈ ರೀತಿ ವಿವಿಧ ರೀತಿಯ ತರಕಾರಿಗಳ ಬೀಜಗಳನ್ನು ಇರಿಸಿದ್ದು. ಇದರ ಜೊತೆಗೆ ಸಂಪೂರ್ಣ ಪೆನ್ಸಿಲ್ ಪರಿಸರ ಸ್ನೇಹಿ ಆಗಿರುತ್ತದೆ.ಚಿಗುರು ಸಂಸ್ಥೆಯವರು ಈ ರೀತಿಯ ಹೊಸ ಪ್ರಯೋಗವನ್ನು ಮಾಡಿದ್ದು ಇದರ ಉದ್ಘಾಟನೆ ಹಾಗೂ ಶಾಲಾ ಮಕ್ಕಳಿಗೆ ಉಚಿತವಾಗಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯಸ್ಥರಾದ ನಾಗರಾಜ್ ಶೆಟ್ಟಿ ರವರು ಚಿಗುರು ಸಂಸ್ಥೆ ಮುಖ್ಯಸ್ಥರಾದ ಗಾಯಿತ್ರಿರವರು ದುರ್ಗಿಗುಡಿ ಸರ್ಕಾರಿ ಶಾಲೆಯ ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…