ಕನಕಪುರ ನ್ಯೂಸ್…

ಕನಕಪುರ ನಗರದಲ್ಲಿ ಎರಡು ದಿನಗಳು ದೇಗುಲಮಠದಿಂದ ಗುರು ಕೋರಣ್ಯದಲ್ಲಿ ಶ್ರೀ ದೇಗುಲಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳು ಹಾಗೂ ಬಿಲ್ವಪತ್ರೆ ಮಠದ ಪರಮಪೂಜ್ಯ ಶ್ರೀ ಶಿವಲಿಂಗ ಮಹಾಸ್ವಾಮಿಗಳು ಮತ್ತು ಮರಳವಾಡಿ ಮಠದ ಕಿರಿಯ ಪೂಜ್ಯ ಶ್ರೀ ಪ್ರಭು ಕಿರೀಟ ಮಹಾಸ್ವಾಮಿಗಳು ಕನಕಪುರ ನಗರದಲ್ಲಿ ಗುರು ಕೋರಣ್ಯವನ್ನು ನಡೆಸಿದರು.

ಶ್ರೀ ದೇಗುಲಮಠದಿಂದ ಗುರು ಕೋರಣ್ಯ
ಭಾದ್ರಪದ ಮಾಸದ ವಾರ್ಷಿಕ ಗುರುಕೋರಣ್ಯ ಕಾಯಕ ಹಿಂದಿನಿದಲೂ ನಡೆದು ಬಂದ ಶ್ರೀ ದೇಗುಲಮಠದ ಸಂಪ್ರದಾಯ. ಯಾವುದೇ ಮಠವು ತನ್ನದೇ ಆದ ಆಸ್ತಿಯನ್ನು ಹೊಂದಿದ್ದರೂ ಅಲ್ಲಿ ನಡೆಯುವ ಅನ್ನದಾಸೋಹ, ವಿದ್ಯಾ ದಾಸೋಹ ಮತ್ತು ಜ್ಞಾನದಾಸೋಹಗಳನ್ನು ನಿರ್ವಹಿಸಲು
ಗುರುಕೋರಣ್ಯ ಪದ್ಧತಿ ನಡೆದುಕೊಂಡು ಬಂದಿದ್ದು, ಈ ಪದ್ಧತಿಯನ್ನು ಬಹಳ ಹಿಂದಿನಿದಲೂ ಶ್ರೀ ದೇಗುಲಮಠದ ಗುರು ಪರಂಪರೆ ಅನೂಚಾನವಾಗಿ ನಡೆಸಿಕೊಂಡು ಬರುತ್ತಿದೆ. ಕನಕಪುರ ನಗರದಲ್ಲಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಎರಡು ದಿವಸಗಳ ಕಾಲ ಗುರುಕೋರಣ್ಯ ಕಾಯಕವನ್ನು ನಡೆಸಲಾಯಿತು.

ಶ್ರೀ ದೇಗುಲ ಮಠಾಧ್ಯಕ್ಷರಾದ ಡಾ|| ಶ್ರೀಶ್ರೀ ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳವರ ದಿವ್ಯ ನೇತೃತ್ವದಲ್ಲಿ ನಡೆದ ಈ ಸಾಂಪ್ರದಾಯಿಕ ಕಾರ್ಯದಲ್ಲಿ ಶ್ರೀ ದೇಗುಲ ಮಠದ ಕಿರಿಯ ಪರಮಪೂಜ್ಯ ಶ್ರೀ ಚನ್ನಬಸವ ಮಹಾಸ್ವಾಮಿಗಳವರು ಹಾಗೂ ಶ್ರೀ ಬಿಲ್ವಪತ್ರೆ ಗವಿಮಠದ ಶ್ರೀ ಶಿವಲಿಂಗ ಮಹಾಸ್ವಾಮಿಗಳ ಅವರು ಹಾಗು ಮರಳವಾಡಿ ಮಠದ ಕಿರಿಯ ಶ್ರೀ ಪ್ರಭು ಕೀರಿಟ ಮಹಾಸ್ವಾಮಿಗಳವರು ಗುರುಕೋರಣ್ಯ ಕಾಯಕವನ್ನು ಕೈಗೊಂಡು ಕನಕಪುರ ನಗರದ ವಿವಿಧ
ಬಡಾವಣೆಗಳಾದ ಕೋಟೆ, ಕೆಂಕೆರಮ್ಮ ರಸ್ತೆ, ಹೌಸಿಂಗ್ ಬೋರ್ಡ್, ಪೈಪ್ ಲೈನ್ ರಸ್ತೆ ಮಹದೇಶ್ವರ ಬಡಾವಣೆ ಎಂ ಜಿ ರಸ್ತೆ ಮುನಿಸಿಪಲ್ ಹೈಸ್ಕೂಲ್ ರಸ್ತೆ, ಹೀಗೆ ಅನೇಕ ಬಡಾವಣೆಗಳಲ್ಲಿ ಸಂಚರಿಸಿ ಕೋರಣ್ಯ ಮಾಡಿದರು, ಮೂವರು ಪೂಜ್ಯರನ್ನೂ ಭಕ್ತವೃಂದವು ಅನನ್ಯ ಭಕ್ತಿಭಾವದಿಂದ ಬರಮಾಡಿಕೊಂಡು, ಅವರವರ ಶಕ್ತಿಯಅನುಸಾರ ದವಸ ಧಾನ್ಯಗಳು, ಎಣ್ಣೆ, ತರಕಾರಿ ಇತ್ಯಾದಿ ದಾಸೋಹ ಪರಿಕರಗಳನ್ನು ಹಾಗೂ ಯಥಾಶಕ್ತಿ
ಕಾಣಿಕೆಗಳನ್ನೂ ಸಮರ್ಪಿಸಿ ಶ್ರಿಗಳವರನ್ನು ¸ ಸತ್ಕರಿಸಿದರು.

ಜೊತೆಗೆ ಭಜನೆ, ತಂಡಗಳು ಮುಂಚೂಣಯಲ್ಲಿದ್ದು ಕಾರ್ಯಕ್ರಮಕ್ಕೆ ಮೆರಗು ನೀಡಿದವು. ಈ ಕಾರ್ಯದಲ್ಲಿ ಕನಕಪುರದ ನಗರದ ಭಕ್ತರು ಹಳೆ ವಿದ್ಯಾರ್ಥಿಗಳು ಎಲ್ಲಾ ಹಿರಿಯರು, ತರುಣರು, ಕಾರ್ಯಕರ್ತರಾದ ಕರಶಿವನಪ್ಪ, ಗಣೇಶ, ನಟರಾಜ್ ಗುರುಪಾದಸ್ವಾಮಿ, ಹರೀಶ್ ಶಿವಮೂರ್ತಿ ಮಹೇಶ್ ಹೆಚ್ಎಸ್ ಶಿವಮೂರ್ತಿ ನಾಗೇಂದ್ರ ಮಾದಪ್ಪ ನಟರಾಜ್ ಮಾಸ್ಟರ್ ವಸಂತ ಶಿವರುದ್ರಯ್ಯ ನಟರಾಜ್ ಭೈರಣ್ಣ ಲೋಕೇಶ್ ಮಹಾದೇವಸ್ವಾಮಿ ರಾಜೇಶ್ ಇನ್ನು ಮುಂತಾದ ಭಕ್ತವೃಂದ ಹಾಗೂ ನೌಕರ ವರ್ಗದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…