ದೆಹಲಿ ನ್ಯೂಸ್…

ಹೊಸ ದೆಹಲಿ ಸೆ.04:ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆದ “ಮೆಹೆಂಗಾಯಿ ಪರ್ ಹಲ್ಲಾ ಬೋಲ್ ರ‍್ಯಾಲಿ” ದೇಶದಲ್ಲಿ ವಿಪರೀತವಾಗಿ ಏರಿರುವ ಬೆಲೆ ಏರಿಕೆ ವಿರುದ್ಧದ ದೆಹಲಿ ಚಲೋ ಕಾರ್ಯಕ್ರಮದಲ್ಲಿ ಕರ್ನಾಟಕದಿಂದ ಕಾಂಗ್ರೆಸ್ ನ ನೂರಾರು ಸಂಖ್ಯೆಯಲ್ಲಿ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಕೆಪಿಸಿಸಿ ಸಹಕಾರ ರಾಜ್ಯ ಸಂಚಾಲಕರಾದ ಡಾ ಆರ್ ಎಂ ಮಂಜುನಾಥ ಗೌಡ, ಮಾಜಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪಿ.ಓ. ಶಿವಕುಮಾರ್, ಕಾಂಗ್ರೆಸ್ ಮುಖಂಡರುಗಳಾದ ಡಾ. ಶ್ರೀನಿವಾಸ್ ಕರಿಯಣ್ಣ,ತರೀಕೆರೆಯ ದೋರನಾಳು ಪರಮೇಶ್, ಚೆನ್ನಗಿರಿಯ ಬಸವರಾಜ್ ಶಿವಗಂಗಾ, ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ವಕ್ತಾರ ರಮೇಶ್ ಶಂಕರಘಟ್ಟ, ಶಿವಮೊಗ್ಗದ ಕಾಂಗ್ರಸ್ ಮುಖಂಡರುಗಳಾದ
ಪ್ರಪುಲ್ಲ, ರಂಗಸ್ವಾಮಿ, ಸುಕೇಶ್, ರುದ್ರೇಶ್ ಚನ್ನಗಿರಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…