ತೀರ್ಥಹಳ್ಳಿ ತಾಲೂಕಿನ ಸ.ಕಿ.ಪ್ರಾ.ಶಾಲೆ.ಬಸವನಗದ್ದೆ ಯಲ್ಲಿ….ಶಾಲಾ ಪ್ರಾರಂಭೋತ್ಸವವನ್ನು ಮಕ್ಕಳ ಮನೆಗೆ ಭೇಟಿ ನೀಡಿ…ಅವರಿಂದಲೇ ಒಂದೊಂದು ಗಿಡ ನೆಡೆಸುವುದರ ಮೂಲಕ ಶಾಲಾ ಪ್ರಾರಂಭೋತ್ಸವ… ಕಾರ್ಯಕ್ರಮವನ್ನು ಮಾಡಲಾಯಿತು…ಹಾಗೂ ವಿಶೇಷ ದಾಖಲಾತಿ ಆಂದೋಲನ ಕೈಗೊಳ್ಳಲಾಯಿತು…ಮಕ್ಕಳ ಕಲಿಕೆಗೆ ಪೂರಕವಾಗುವಂತೆ ಪ್ರೇರೇಪಿಸಲು ಅವರಿಗೆ ನೋಟ್ಬುಕ್…ಲೇಖನಿ ಸಾಮಾಗ್ರಿಗಳು..ಮಾಸ್ಕ್ ..ಕ್ರಯಾನ್ಸ್…ಡ್ರಾಯಿಂಗ್ ಬುಕ್ ಗಳನ್ನು ವಿತರಿಸಲಾಯಿತು.

“ಮಗುವಿಗೊಂದು ಗಿಡ…ಊರಿಗೊಂದು ವನ” ಎಂಬ ಪರಿಕಲ್ಪನೆಯಂತೆ….ವಿದ್ಯಾರ್ಥಿಗಳಲ್ಲಿ ಪರಿಸರ ಸಂರಕ್ಷಣೆಯ ಕಾಳಜಿಯನ್ನು ಮೂಡಿಸಲಾಯಿತು. ಈ ಸಂದರ್ಭದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ರಾದ ಶ್ರೀ.ಚಂದ್ರ.ಕೆ.ಆರ್..ಸದಸ್ಯರಾದ ಶ್ರೀ.ರವಿ..ಶ್ರೀ.ದೇವರಾಜ್..ಶ್ರೀಮತಿ.ಗೀತಾ..ಶ್ರೀಮತಿ.ಮಾಲಾ..ಶ್ರೀ.ಚಂದ್ರ.ಕೆ.ಬಿ..ಶ್ರೀಮತಿ.ಕಾವ್ಯ….ಶ್ರೀ.ಪ್ರವೀಣ.ಹಾಗೂ ಹಲವು ಪೋಷಕರು ಹಾಗೂ ಶಿಕ್ಷಕರಾದ ಹೂವಪ್ಪ ಹಾಗೂ ಮುಖ್ಯಶಿಕ್ಷಕಿ ಶ್ರೀಮತಿ.ಅನಿತಕೃಷ್ಣ ರವರು ಉಪಸ್ಥಿತರಿದ್ದರು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153