ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಸೋಗಾನೆ ಗ್ರಾಮದ ವಿನಾಯಕ ನಗರದಲ್ಲಿ ಸೋಗಾನೆ ಸರ್ವೆ ನಂ 120 ರಲ್ಲಿ 40-50 ವರ್ಷಗಳಿಂದ ಸಾಗುವಳಿ ಮಾಡುತ್ತಿರುವ 63 ರೈತ ಕುಟುಂಬದವರಿಗೆ ಸಾಗುವಳಿ ಚೀಟಿ ಹಾಗೂ ಸಾಮಾಜಿಕ ಭದ್ರತೆ ಯೋಜನೆಯ ಮಂಜೂರಾತಿ ಪತ್ರಗಳನ್ನು ಗ್ರಾಮಾಂತರ ಶಾಸಕರು ಹಾಗೂ ಬಗರ್ ಹುಕ್ಕುಂ ಸಮಿತಿ ಅಧ್ಯಕ್ಷರಾದ ಕೆ.ಬಿ ಅಶೋಕ ನಾಯ್ಕ ವಿತರಿಸಿದರು.

ಈ ಸಂದರ್ಭದಲ್ಲಿ ಬಗರ್ ಹುಕ್ಕುಂ ಕಮಿಟಿ ಸದಸ್ಯರುಗಳು, ರೈತ ಹೋರಾಟ ಸಮಿತಿಯವರು, ಕಂದಾಯ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರುಗಳು, ಗ್ರಾಮಸ್ಥರು, ರೈತರು, ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…