ಸಾಗರ ತಾಲೂಕಿನ ಸಿಗಂದೂರು ಹೊಳೆಬಾಗಿಲು ಲಾಂಚ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲಾಂಚ್ ಚಾಲಕರಿಗೆ ಕಳೆದ ಒಂದು ವರ್ಷದಿಂದ ವೇತನವಾಗಿಲ್ಲ ಎಂದು ಶಾಸಕ ಹಾಲಪ್ಪನವರಿಗೆ ಮನವಿ ಮಾಡಿದರು.

ಶಾಸಕರಾದ ಹೆಚ್.ಹಾಲಪ್ಪ ನವರು, ಬೆಂಗಳೂರಿನಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಎಸ್.ಅಂಗಾರ ರವರನ್ನು ಬೇಟಿಯಾಗಿ ಚರ್ಚಿಸಿದರು.ಸೂಕ್ತವಾಗಿ ಸ್ಪಂದಿಸಿದ ಸಚಿವರು, ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾತನಾಡಿ ಶೀಘ್ರವಾಗಿ ವೇತನ ಪಾವತಿ ಮಾಡುವಂತೆ ನಿರ್ದೇಶಿಸಿದರು.

ವರದಿ ಪ್ರಜಾಶಕ್ತಿ…