ಜುಲೈ ಒಂದರಂದು ರಾಷ್ಟ್ರೀಯ ವೈದ್ಯರ ದಿನವನ್ನು ಸೇವಾ ಭಾರತಿ ಸಂಸ್ಥೆಯ ವತಿಯಿಂದ ಆಚರಿಸಿದರು.ನಮಗೆ ಬೌದ್ಧಿಕ ಆರೋಗ್ಯ ತುಂಬುವಲ್ಲಿ ಗುರುಗಳ ಪಾತ್ರ ಎಷ್ಟಿದೆಯೋ ನಮ್ಮ ದೈಹಿಕ ಆರೋಗ್ಯದ ಕಾಳಜಿ ವಹಿಸುವ ವೈದ್ಯರ ಪಾತ್ರವೂ ನಮ್ಮ ಜೀವನದಲ್ಲಿ ಅಷ್ಟೇ ಇರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕೊರೋನಾ ದಂತಹ ಸಾಂಕ್ರಾಮಿಕದ ಸಂದರ್ಭದಲ್ಲಂತೂ ವೈದ್ಯಕೀಯ ಕ್ಷೇತ್ರವೆಂಬುದು ಶತ್ರುಗಳಿಗೆ ಎದೆ ಕೊಟ್ಟು ಹೋರಾಡುವ ಸೈನಿಕರಂತೆ ಕೆಲಸ ಮಾಡುತ್ತಿದೆ. ನಮ್ಮ ಸರಕಾರಿ ಆಸ್ಪತ್ರೆಯ ವೈದ್ಯರುಗಳೂ ಸಹಾ ಬಡ ಜನರಿಗೆ ಯಾವುದೇ ಕೊರತೆ ಇಲ್ಲದಂತೆ ಅತ್ಯುತ್ತಮ ಸೇವೆ ನೀಡಿ ಜನತೆಯ ಪ್ರಶಂಸೆಗೆ ಪಾತ್ರರಾಗಿದ್ದಾರೆ.ನಿನ್ನೆ ಜುಲೈ ಒಂದರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಿದರು.ಸೇವಾಭಾರತಿ ಸಂಸ್ಥೆಯ ವತಿಯಿಂದ ತೀರ್ಥಹಳ್ಳಿಯ ಹಿರಿಯ ವೈದ್ಯರುಗಳು ಸೇರಿದಂತೆ ಐವತ್ತಕ್ಕೂ ಹೆಚ್ಚು ವೈದ್ಯರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಶಾಸಕರಾದ ಆರಗ ಜ್ಞಾನೇಂದ್ರ ರವರು, ಮಂಡಲ ಬಿಜೆಪಿ ಅಧ್ಯಕ್ಷರಾದ ಶ್ರೀ ಬಾಳೆಬೈಲು ರಾಘವೇಂದ್ರ ರವರು , ತಹಸೀಲ್ದಾರ್ ರವರಾದ ಶ್ರೀಪಾದ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ವೈದ್ಯಕೀಯ ಸೇವೆಯ ಕುರಿತು ಅಭಿನಂದಿಸಿದರು. ತೀರ್ಥಹಳ್ಳಿಯ ಸರಕಾರಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿಗಳಾದ ಡಾ||ಗಣೇಶ್ ಭಟ್, ತಾಲೂಕ್ ಆರೋಗ್ಯಾಧಿಕಾರಿ ಡಾ|| ಅನಿಕೇತನ, ಹಿರಿಯ ವೈದ್ಯರಾದ ಡಾ|| ನಾರಾಯಣಸ್ವಾಮಿ, ಡಾ|| ಮನೋಹರ್ ರವರೂ ಕೂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದು.

ವರದಿ ಮಂಜುನಾಥ ಶೆಟ್ಟಿ ಶಿವಮೊಗ್ಗ

CCTV SALES & SERVICE

9880074684

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153