ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆಯ 2021 22 ನೇ ಸಾಲಿನ ಕಾರ್ಯಕ್ರಮ ಅಂಗವಾಗಿ  ಅನ್ನಪೂರ್ಣೇಶ್ವರಿ ಜಯಂತಿ ಪ್ರಯುಕ್ತ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಅಕ್ಕಿ  ಚೀಲಗಳನ್ನು ಮತ್ತು ಅಗತ್ಯ ವಸ್ತುಗಳ ಸಾಮಾನುಗಳನ್ನು ನೀಡಲಾಯಿತು, ಈ ಸಂದರ್ಭದಲ್ಲಿ ರೋಟರಿ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದ ಮಂಜುನಾಥ್ ಕದಂ ರವರು ಮಾತನಾಡುತ್ತಾ ಜುಲೈ 1ರಿಂದ 2021 22 ನೇ ಸಾಲಿನ ಅವಧಿಯಲ್ಲಿ ಹಮ್ಮಿಕೊಂಡ ಪ್ರಥಮ ಕಾರ್ಯಕ್ರಮವಾಗಿದ್ದು ಅನ್ನಪೂರ್ಣೇಶ್ವರಿ ಜಯಂತಿ  ಪ್ರಯುಕ್ತ ಗುಡ್ ಲಕ್ ಆರೈಕೆ ಕೇಂದ್ರಕ್ಕೆ ಅಗತ್ಯವಸ್ತುಗಳನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಇಂತಹ ಅನೇಕ ಸಮಾಜ ಸೇವೆಗಳನ್ನು ಮಾಡುವಲ್ಲಿ ರೋಟರಿ ಸಂಸ್ಥೆಯು ಸದಾ ಸಿದ್ಧವಿರುತ್ತದೆ ಈ ವರ್ಷ ಹಲವಾರು ಸಮಾಜಕ್ಕೆ ಅನುಕೂಲವಾಗುವಂತಹ ಯೋಜನೆಗಳು  ಹಮ್ಮಿ ಕೊಂಡಿರುತ್ತೇವೆ ಎಂದು ತಿಳಿಸಿದರು, ಇದೇ ಸಂದರ್ಭದಲ್ಲಿ  ಮಾಜಿ ಅಸಿಸ್ಟೆಂಟ್ ಗೌರ್ನರ್ ವಿಜಯ್ ಕುಮಾರ್ ಜಿ , ರೋಟರಿ ಶಿವಮೊಗ್ಗ ಪೂರ್ವದ  ಕಾರ್ಯದರ್ಶಿ ಸತೀಶ್ ಚಂದ್ರ, ಮಾಜಿ ಅಧ್ಯಕ್ಷರು ಗಣೇಶ್, ಗುಡ್ ಲಕ್ ಹಾರೈಕೆ ಕೇಂದ್ರದ ಅಧ್ಯಕ್ಷರಾದ  ರವೀಂದ್ರನಾಥ ಐತಾಳ್, ರೋಟರಿಯನ್ ಕುಮಾರಸ್ವಾಮಿ, ಕಾರ್ಯದರ್ಶಿ ಪಂಚಾಕ್ಷರಯ್ಯ, ಮತ್ತು ಇತರರು ಉಪಸ್ಥಿತರಿದ್ದರು

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ