ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಸನ್ಮಾನ್ಯ, ಎಚ್. ಎಸ್. ಸುಂದರೇಶ್ ರವರ ಜನ್ಮ ದಿನಾಚರಣೆ ಅಂಗವಾಗಿ ಇಂದು ಗೋಪಾಲ ಗೌಡ ಬಡಾವಣೆ ದ್ರೌಪದಮ್ಮ ಸರ್ಕಲ್ ನ ದ್ರೌಪದಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಕೇಕ್ ಕತ್ತರಿಸುವ ಮೂಲಕ ಸನ್ಮಾನಿಸಿ ಜನ್ಮದಿನೋತ್ಸವವನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರುಗಳಾದ ಜಿ.ಡಿ. ಮಂಜುನಾಥ್, ಟಿ.ಎಸ್. ಚಂದ್ರಶೇಖರ್, ಟಿ. ಡಿ. ಗೀತೇಂದ್ರಗೌಡ, ಹಾಲಪ್ಪನವರು, ವನಮಾಲಮ್ಮ,ರಾಜಶೇಖರ್ , ಮಂಜುನಾಥ್ ,ಶಿವಕುಮಾರ್ ಶ್ರೀಮತಿ ಕವಿತಾ, ನಾಜೀಮಾ, ಪ್ರೇಮ ಶೆಟ್ಟಿ, ಹೆಚ್. ಆರ್. ಮಹೀಂದ್ರ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರಾದ ಬಿ. ಆರ್. ಶಂಕರಪ್ಪ, ನಿವೃತ್ತ ಎಂಜಿನಿಯರ್ ಅಣ್ಣಪ್ಪ ನವರು ನಾಗೇಶ್, ಮುರುಳಿ, ನಿವೃತ್ತ ಜೈಲ್ ಸೂಪರ್ಡೆಂಟ್ ಶಿವಮೂರ್ತಿ, ಸುನೀಲ್, ತೇಜಸ್ವಿಗೌಡ, ಪವನ್, ಅವಿನಾಶ್, ಇನ್ನೂ ಮುಂತಾದ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಹಾಜರಿದ್ದರು .

ವರದಿ ಮಂಜುನಾಥ್ ಶೆಟ್ಟಿ…