ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ನಾಡ ಹಬ್ಬ ದಸರಾ – ಮಹಿಳಾ ದಸರಾ ಸಮಿತಿಯಿಂದ 75ನೇ ವರ್ಷದ ಸ್ವಾತಂತ್ರೋತ್ಸವ- ಅಮೃತ ಮಹೋತ್ಸವದ ಅಂಗವಾಗಿ 27 9 2022 ಮಂಗಳವಾರ 4:00ಗೆ ಗೋಪಿ ವೃತ್ತದಿಂದ ಫ್ರೀಡಂ ಪಾರ್ಕ್ ನವರೆಗೆ ಆಯೋಜಿಸಿರುವ “ಮಹಿಳಾ ಸ್ವಾತಂತ್ರ್ಯ ನಡಿಗೆಯ” ಪ್ರಚಾರ ವಾಹನಕ್ಕೆ ಇಂದು ಮಹಾನಗರ ಪಾಲಿಕೆಯ ಆವರಣದಲ್ಲಿ ಮಹಾಪೌರರಾದ ಸುನಿತ ಅಣ್ಣಪ್ಪ ಹಾ ಗೂ ಉಪ ಮಹಾಪೌರರಾದ ಶಂಕರ್ ಗನ್ನಿ ರವರು ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಹಿಳಾದಸರ ಸಮಿತಿಯ ಅಧ್ಯಕ್ಷರು ,ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಸದಸ್ಯರಾದ ಎಚ್ ಸಿ ಯೋಗೇಶ್ , ಜ್ಞಾನೇಶ್ವರ್, ವಿಶ್ವನಾಥ್, ಮಂಜುನಾಥ್, ಧೀರಜ್ ಹೊನ್ನವಿಲೆ, ವಿಶ್ವಾಸ್, ರಾಜು , ಶಿವಕುಮಾರ್ ,ಮಂಜುಳಾ ಶಿವಣ್ಣ, ಅನಿತಾ ರವಿಶಂಕರ್, ಸುವರ್ಣ ಶಂಕರ್, ಸುರೇಖಾ ಮುರುಳಿಧರ್,ಕಲ್ಪನಾ ರಮೇಶ್, ಆರತಿ ಅ.ಮ.ಪ್ರಕಾಶ್, ಮೀನಾ ಗೋವಿಂದ್ ರಾಜ್, ಲಕ್ಷ್ಮಿ ಶಂಕರ್ ನಾಯ್ಕ್, ಭಾನುಮತಿ ವಿನೋದ್ ನಾಮ ನಿರ್ದೇಶನ ಸದಸ್ಯರಾದ ಅನ್ನಪೂರ್ಣ (ಅನಿತಾ), ಎಚ್ ಎಮ್ ಶೀರೀಸ್, ಪನ್ನೀರ್ ಸೆಲ್ವಂ, ಹೇಮಂತ್ , ಮೂರ್ತಿ ಹಾಗೂ ಪಾಲಿಕೆ ಆಯುಕ್ತರಾದ ಮಾಯಣ್ಣಗೌಡ ಹಾಗೂ ಪಾಲಿಕೆಯ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…