ಶಿವಮೊಗ್ಗದ ಪ್ರತಿಷ್ಠಿತ ಕ್ಲಬ್ ಗಳಲ್ಲಿ ಒಂದಾದ ಕಂಟ್ರಿಕ್ಲಬ್‌ನಲ್ಲಿ ನಡೆದ ಚುನಾವಣೆಯಲ್ಲಿ ಅತ್ಯದಿಕ ಮತ ಪಡೆದು ವಿಜೇತರಾಗಿರುವ ಶ್ರೀ ಚೂಡಾಮಣಿ ಇ ಪವಾರ ರವರಿಗೆ ಭಾರತ್ ಸ್ಕೌಟ್ಶ್ ಮತ್ತು ಗೈಡ್ಸ್ ಶಿವಮೊಗ್ಗ ಜಿಲ್ಲಾ ಸಂಸ್ಥೆ ವತಿಯಿಂದ ಜಿಲ್ಲಾ ಮುಖ್ಯ ಆಯುಕ್ತರಾದ ಶ್ರೀ ಹೆಚ್.ಡಿ.ರಮೇಶಶಾಸ್ತಿç, ಜಿಲ್ಲಾ ಸಹ ಕಾರ್ಯದರ್ಶಿ ಶ್ರೀ ವೈ.ಆರ್.ವಿರೇಶಪ್ಪ, ಎ.ಎಸ್.ಒ.ಸಿ ಶ್ರೀಮತಿ ಭಾರತಿ ಡಾಯಸ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ವಿಜಯಕುಮಾರ, ಹಿರಿಯ ಸ್ಕೌಟರ್, ಶ್ರೀ ರಾಘವೇಂದ್ರ ಆರ್ ಹಾಗೂ ಪದಾಧಿಕಾರಿಗಳೆಲ್ಲರು ಸೇರಿ ಹೃದಯಪೂರ್ವಕ ಸನ್ಮಾನವನ್ನು ಮಾಡಿದರು.

ಶ್ರೀ ಚೂಡಾಮಣಿ ಇ ಪವಾರ್ ರವರು ಜಿಲ್ಲಾ ಸಂಸ್ಥೆಯ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸ್ಕೌಟ್ ಭವನದಲ್ಲಿ ಅನೇಕ ಅಭಿವೃದ್ದಿಕಾರ್ಯಗಳನ್ನು ಕೈಗೊಂಡಿದ್ದಾರೆAದು ಮುಂದೆಯು ಸಹ ಹೆಚ್ಚಿನ ಸಂಖ್ಯೆಯಲ್ಲಿ ಸ್ಕೌಟಿಂಗ್ ಗೈಡಿಂಗಿಗೆ ಸಮಯ ಕೊಟ್ಟು ಸಮಾಜಕ್ಕೆ ಹೆಚ್ಚಿನ ಸೇವೆ ಕೊಡುವಂತಾಗಲಿ ಎಂದರು. ಈಗಾಗಲೆ ಇವರು ರೋಟರಿಯಲ್ಲಿ ಮಾಜಿ ಸಹಾಯಕ ಗರ‍್ನರ್ ಆಗಿ, ಮೈಲಾರೇಶವರ ದೇವಸ್ಥಾನದಲ್ಲಿ ಮಾಜಿ ಅಧ್ಯಕ್ಷರಾಗಿ, ಕ್ಷತ್ರೀಯ ಮರಾಠ ಸಂಘದ ಉಪಾಧ್ಯಕ್ಷರಾಗಿ ಹಾಗೂ ಹಲವಾರು ಸಂಘ ಸಂಸ್ಥೆಯಲ್ಲಿ ತಮ್ಮ ಸೇವೆಯನ್ನು ನೀಡುತ್ತಿದ್ದಾರೆ.

ವರದಿ ಪ್ರಜಾಶಕ್ತಿ…