ನಾಡಹಬ್ಬ ದಸರಾ, ಶಿವಮೊಗ್ಗ ಮಹಾನಗರ ಪಾಲಿಕೆ ವತಿಯಿಂದ ವೈಭವದ ಕಲಾ ದಸರಾ ಜಾಥ ಕಾರ್ಯಕ್ರಮಕ್ಕೆ ಬಸವ ಕೇಂದ್ರದ ಶ್ರೀ ಶ್ರೀ ಮರಳುಸಿದ್ದ ಸ್ವಾಮೀಜಿಗಳು ಚಾಲನೆ ನೀಡಿದರು.ಈ ಕಾರ್ಯಕ್ರಮದಲ್ಲಿ ನೂರಾರು ಕಲಾವಿದರು, ಮಹಿಳಾ ತಂಡಗಳು, ಡೊಳ್ಳು ಕುಣಿತ, ವೀರಗಾಸೆ, ಗೊಂಬೆ ಕುಣಿತ ಹಾಗೂ ಸಾಂಸ್ಕೃತಿಕ ಕಲಾ ತಂಡಗಳು ಆಗಮಿಸಿದ್ದು ಜಾಥವು ವಿನೋಬನಗರದ ತರಕಾರಿ ಮಾರುಕಟ್ಟೆಯಿಂದ ಫ್ರೀಡಂ ಪಾರ್ಕ್ ವರೆಗೂ ಅದ್ದೂರಿಯಾಗಿ ಜರುಗಿತು.

ಜಾಥ ಕಾರ್ಯಕ್ರಮದಲ್ಲಿ ಕಲಾ ದಸರಾ ಸಮಿತಿ ಅಧ್ಯಕ್ಷರಾದ ನಾಗರಾಜ್ ಕಂಕಾರಿ, ಪಾಲಿಕೆ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿತಾ ರವಿಶಂಕರ್, ಪಾಲಿಕೆ ಸದಸ್ಯರುಗಳಾದ ಮಂಜುನಾಥ್, ಶಿವಕುಮಾರ್, ಮಾಜಿ ಉಪಮೇಯರ್ ಎಚ್ ಪಾಲಾಕ್ಷಿ, ಪಾಲಿಕೆ ಅಧಿಕಾರಿಗಳು ಹಾಗೂ ಸಾರ್ವಜನಿಕ ಬಂಧುಗಳು ಜಾಥ ದಲ್ಲಿ ಹೆಜ್ಜೆ ಹಾಕಿದರು.

ವರದಿ ಪ್ರಜಾಶಕ್ತಿ…