ಕ್ರಾಂತಿಕಾರಿ ಭಗತ್ ಸಿಂಗ್ ರವರ 115 ನೇ ಹುಟ್ಟು ಹಬ್ಬದ ಪ್ರಯುಕ್ತ ಭಗತ್ ಸಿಂಗ್ ಅಭಿಮಾನಿ ಬಳಗ ಶಿವಮೊಗ್ಗದ ವತಿಯಿಂದ ಸರ್ಜಿ ಫೌಂಡೇಶನ್ ಮಾಲೀಕರು ಹಾಗೂ ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿ ಯಾದ ಡಾ. ಧನಂಜಯ್ ಸರ್ಜಿ ರವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ನಂತರ ಮಾತನಾಡಿದ ಡಾ. ಧನಂಜಯ್ ಸರ್ಜಿ ರವರು ಕ್ರಾಂತಿಕಾರಿ ಭಗತ್ ಸಿಂಗ್ ರವರು ಭಾರತ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದಾರೆ. ವರ್ಷಕೊಮ್ಮೆ ಅವರ ಹುಟ್ಟು ಹಬ್ಬದ ಪ್ರಯುಕ್ತ ಮುಂದಿನ ದಿನಗಳಲ್ಲಿ ಸಮಾಜಮುಖಿ ಕೆಲಸಗಳು ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆ ಮುಖ್ಯಸ್ಥರಾದ ಬಸವರಾಜ್ ,ಸರ್ಜಿ ಸಂಸ್ಥೆಯ ಮ್ಯಾನೇಜರ್ ಪುರುಷೋತ್ತಮ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…