ಶಿವಮೊಗ್ಗದ ವಾರ್ಡ್ 12 ರ ಬಾಪೂಜಿನಗರದ ಅಂಗಯ್ಯನ ಕೆರೆ ನಿವಾಸಿಗಳ ಬಹು ದಶಕಗಳ ಕನಸು ಈಡೇರಿದೆ.ಬಿಜೆಪಿಯ ಸರ್ಕಾರದಿಂದ ನಿಮ್ಮ ಸೂರಿಗೆ ಭದ್ರತೆ ಒದಗಿದೆ. ಇದಕ್ಕಾಗಿ ಶ್ರಮಿಸಿದ ಪಾಲಿಕೆ ಸದಸ್ಯೆ ಶ್ರೀಮತಿ ಸುರೇಖ ಮುರಳೀಧರ್ ಗೆ ಹಾಗೂ ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿ ವರ್ಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಾಪೂಜಿನಗರದ ಮುಖ್ಯ ರಸ್ತೆಯ ರಾಮಮಂದಿರದಲ್ಲಿ ಏರ್ಪಡಿಸಲಾಗಿದ್ದ ಹಕ್ಕುಪತ್ರ ವಿತರಣಾ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಶಾಸಕರಾದ ಕೆ ಎಸ್ ಈಶ್ವರಪ್ಪ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ 47 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ಸೂಡಾ ಅಧ್ಯಕ್ಷರಾದ ಎನ್.ಜಿ. ನಾಗರಾಜ್ ಮಹಾಪೌರರಾದ ಸುನಿತಾ ಅಣ್ಣಪ್ಪ ಪಾಲಿಕೆ ಸದಸ್ಯೆ ಸುರೇಖ ಮುರಳೀಧರ್, ಭಾಜಪ ನಗರ ಅಧ್ಯಕ್ಷ ಜಗದೀಶ್, ನಗರ ಸ್ಲಂ ಮೋರ್ಚಾದ ಶಶಿಧರ್, ಆನಂದ್, ಮಣಿ, ಭಾಸ್ಕರ್, ನಾಗರಾಜ್ ವಾರ್ಡ್ ನ ಪ್ರಮುಖರಾದ ಉದ್ಯಮಿ ಮುರಳೀಧರ್, ಮೂರ್ತಿ, ರಾಜಣ್ಣ, ನಾಗರಾಜ, ರೇವಣಸಿದ್ದಪ್ಪ, ರಶ್ಮಿ, ನಾಗಮ್ಮ, ಸುಮಂತ, ಅಣ್ಣಪ್ಪ, ಸಿದ್ದಪ್ಪ ಮುಂತಾದವರು ಹಾಗೂ .
ಕೊಳಚೆ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…