ಶಿವಮೊಗ್ಗ: ಎಂಎಸ್ಐಎಲ್ ಮದ್ಯ ಮಾರಾಟ ಮಳಿಗೆ ರದ್ದು ಮಾಡಲು ಆಗ್ರಹಿಸಿ ಕೆ.ವೈ.ಎಸ್. ಸಂಘಟನೆಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಆಲ್ಕೊಳದ ಇಂದಿರಾಗಾಂಧಿ ಸರ್ಕಲ್ ನಲ್ಲಿ ಎಂ.ಎಸ್.ಐಎಲ್. ಮದ್ಯದ ಮಳಿಗೆ ತೆರೆಯಲು ಪ್ರಕ್ರಿಯೆ ನಡೆಯುತ್ತಿದೆ.ಮದ್ಯ ಮಳಿಗೆ ಅನುಮತಿ ಕೊಡಬಾರದು. ಹತ್ತಿರದಲ್ಲಿಯೇ ಸರ್ಕಾರಿ ಶಾಲೆ , ದೇವಸ್ಥಾನ, ಶಾಪ್, ಎಪಿಎಂಸಿ ಮಾರುಕಟ್ಟೆ ಇದೆ .ಇಲ್ಲಿ ಮದ್ಯದಂಗಡಿ ತೆರೆದರೆ ಸಾರ್ವಜನಿಕರಿಗೆ ತೊಂದರೆ ಹೆಚ್ಚುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಮದ್ಯದಂಗಡಿಗೆ ಅನುಮತಿ ನೀಡಬಾರದು.ಮತ್ತು ಇದರೆ ಬಾರ್ ಅಂಡ್ ರೆಸ್ಟೊರೆಂಟ್ ಗಳಿಗೂ ಕೂಡ ಅನಮತಿ ನೀಡಬಾರದು ಎಂದು ಮನವಿಯಲ್ಲಿ ಆಗಮಿಸಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ವಸಂತಕುಮಾರ್, ಶರವಣ, ಶಿವಣ್ಣ, ರುದ್ರೇಶ್, ದಯಾನಂದ, ಗಣೇಶ ಮುಂತಾದವರಿದ್ದರು.

ವರದಿ ಪ್ರಜಾಶಕ್ತಿ…