ಶಿವಮೊಗ್ಗ ನಗರದ ಕೆ.ಆರ್.ಪುರಮ್ ರಸ್ತೆಯಲ್ಲಿರುವ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ದಾಸ ಶ್ರೇಷ್ಠರಾದ ಶ್ರೀ ವಿಜಯದಾಸರ ಆರಾದನಾ ಮಹೋತ್ಸವವನ್ನು ನಗರದ ಗೆಳೆಯ ವೃಂದದ ವತಿಯಿಂದ ಆಚರಿಸಲಾಯಿತು. ಈ ಪ್ರಯುಕ್ತ ನಗರದ ಕೆ.ಆರ್.ಪುರಮ್, ತಿಮ್ಮಪ್ಪನ ಕೊಪ್ಪಲು ಮತ್ತು ತುಮಕೂರು ಶ್ಯಾಮರಾವ್ ರಸ್ತೆಯ ಬಡಾವಣೆಗಳಲ್ಲಿ ವಿಜಯದಾಸರ ಕೀರ್ತನೆಗಳನ್ನು ಹಾಡುತ್ತ ಯಾಯಿವಾರ (ಗ್ರಾಮ ಪ್ರದಕ್ಷಿಣೆ) ನಡೆಸಲಾಯಿತು.

ನಂತರ ಶ್ರೀ ಸಂಜೀವಾಂಜನೇಯ ದೇವಸ್ಥಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿವಿಧ ಭಜನಾ ಮಂಡಳಿವತಿಯಿಂದ ದಾಸರ ಕೀರ್ತನೆಗಳನ್ನು ಹಾಡಲಾಯಿತು, ಹಾಗೂ ಶ್ರೀ ವಿಜಯದಾಸರ ದಾಸರ ಬಗ್ಗೆ ಪಾಂಡುರಂಗಿ ಧರ್ಮಾಚಾರ್, ಪಂ.ಪುರುಷೋತ್ತಮಚಾರ್ ನವರತ್ನ, ರಾಯಚೂರು ಕೃಷ್ಣಮೂರ್ತಿ, ಕುಷ್ಟಗಿ ವಾಸುದೇವ ಮೂರ್ತಿ, ಮತ್ತು ಪಂ.ರಘೋತ್ತಮಚಾರ್ ಸಂಡೂರು ಇವರುಗಳಿಂದ ಉಪನ್ಯಾಸ ನಡೆಸಲಾಯಿತು.
ಚಿತ್ರದಲ್ಲಿ, ಹೆಚ್.ಎಸ್.ನಾಗೇಂದ್ರ, ಟಿ.ವಿ.ಬಿಂದುಮಾಧವ, ಕುಷ್ಠಗಿ ಅನಂತಾಚಾರ್, ಸತ್ಯನಾರಾಯಣ, ಕೇಶವಮೂರ್ತಿ, ಪಲ್ಲಕ್ಕಿ ಮಧುಸೂಧನಾಚಾರ್ ಇನ್ನೂ ಮುಂತಾದ ಮಾಧ್ವ ಪ್ರಮುಖರುಗಳನ್ನು ಕಾಣಬಹುದು.

ವರದಿ ಪ್ರಜಾಶಕ್ತಿ…