ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು ನಡೆದ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯ ಕಾರ್ಯಕಾರಿ ಸಮಿತಿಯ ಸಭೆಯಲ್ಲಿ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಸನ್ಮಾನ್ಯ ಶ್ರೀ ಸಿ ಎಸ್ ಷಡಕ್ಷರಿ ರವರು ರಾಜ್ಯಾದ್ಯಂತ ಇರುವ ಫಾರ್ಮಸಿ ಅಧಿಕಾರಿಗಳಿಗೆ ಏಪ್ರಾನ್ ಮತ್ತು ಬ್ಯಾಡ್ಜ್ ಗಳನ್ನು ವಿತರಿಸಿದರು.

ಫಾರ್ಮಸಿ ಅಧಿಕಾರಿಗಳ ಸಂಘಟನೆಯ ಕಾರ್ಯ ಚಟುವಟಿಕೆಯನ್ನು ಪ್ರಶಂಶಿಸುತ್ತಾ ಪ್ರಪ್ರಥಮ ಬಾರಿಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಜಾರಿಯ ಬಗ್ಗೆ ತಿಳಿಸುತ್ತಾ ಇಂದು ಸನ್ಮಾನ್ಯ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಅಂತಿಮಗೊಳಿಸಲಾಗಿದ್ದು ದಿನಾಂಕ 7 ರಂದು ಸರ್ಕಾರದಿಂದ ಅಧಿಕೃತ ಆದೇಶ ಬರುವುದಾಗಿ ಸಂದೇಶವನ್ನು ನೀಡಿದರು.

ದಿನಾಂಕ 10 ರಂದು ಮುಖ್ಯಮಂತ್ರಿಗಳ ನಿಗದಿತ ಸಮಯವನ್ನು ನಿಗದಿಪಡಿಸಿಕೊಂಡು ಸಮಸ್ತ ಸರ್ಕಾರಿ ನೌಕರರು ಅಭಿನಂದಿಸುವ ಸಲುವಾಗಿ ರಾಜಧಾನಿಯಲ್ಲಿ ಸೇರುವಂತೆ ತಿಳಿಸಿ ಹರ್ಷ ವ್ಯಕ್ತಪಡಿಸಿದರು.ಈ ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ ಆರ್ ಶ್ರೀನಿವಾಸ್ , ಫಾರ್ಮಸಿ ಅಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ವಿ ಪ್ರಭಾಕರ್ ,ಕಾರ್ಯಾಧ್ಯಕ್ಷ ಗಂಗಾಧರ್ ಗಟ್ಟಿ ಹಾಗೂ ಹಿರಿಯ ಉಪಾಧ್ಯಕ್ಷರಾದ ವೈ ಮೋಹನ್, ಪ್ರಕಾಶ್ ಗುಲ್ಬರ್ಗ, ಸುರೇಶ್ ವಾಣಿವಿಲಾಸ್ ಮತ್ತು ರಾಜ್ಯ ಕಾರ್ಯದರ್ಶಿಗಳಾದ ಎಸ್ಎಂ ರವಿಕುಮಾರ್ ಖಜಾಂಚಿಗಳಾದ ಕೃಷ್ಣಾನಂದ ಶ್ರೀಮತಿ ಕವಿತಾ ಹಿರೇಮಠ, ಸುಮಾ ,ಶ್ರೀಮತಿ ವೃಂದ ಮತ್ತು ಇತರರು ಉಪಸ್ಥಿತರಿದ್ದರು.

ರಾಜ್ಯದ್ಯಂತ ಎಲ್ಲಾ ಜಿಲ್ಲಾ ಸಂಘದ ಅಧ್ಯಕ್ಷರುಗಳು ಪ್ರಧಾನ ಕಾರ್ಯದರ್ಶಿಗಳು ರಾಜ್ಯ ಪರಿಷತ್ ಸದಸ್ಯರು ಮತ್ತು ಕೇಂದ್ರ ಕಾರ್ಯ ಸಮಿತಿಯ ಸದಸ್ಯರು ಹಾಜರಿದ್ದು ಸಭೆಯನ್ನು ಯಶಸ್ವಿಗೊಳಿಸಿದರು

ವರದಿ ಪ್ರಜಾಶಕ್ತಿ…