ಕರ್ನಾಟಕ ನಾಡು ರಕ್ಷಣಾ ವೇದಿಕೆ ರವರ ವತಿಯಿಂದ ನಡೆದ ಪುನೀತ್ ರಾಜಕುಮಾರ್ ಒಂದನೇ ವರ್ಷದ ಸ್ಮರಣಾರ್ಥ ಪ್ರಯುಕ್ತ ಕಾರ್ಯಕ್ರಮ ಮತ್ತು ಸರ್ಜಿ ಆಸ್ಪತ್ರೆಗಳ ಸಮೂಹ ಸಂಸ್ಥೆ ,ಸರ್ಜಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಾಗೂ ಶಂಕರ್ ಕಣ್ಣಿನ ಹಾಸ್ಪಿಟಲ್ ವತಿಯಿಂದ ನೇತ್ರದಾನ ಹಾಗೂ ಕನ್ನಡ ಧ್ವಜಾರೋಹಣ ಕಾರ್ಯಕ್ರಮವನು ಶಿವಮೊಗ್ಗ ವಿಧಾನಸಭಾ ಅಭ್ಯರ್ಥಿ ಡಾ. ಧನಂಜಯ್ ಸರ್ಜಿ ರವರು ಉದ್ಘಾಟಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಾ. ಧನಂಜಯ್ ಸರ್ಜಿ ರವರು ಕನ್ನಡ ರಾಜ್ಯೋತ್ಸವ ಪ್ರಯುಕ್ತ ಪುನೀತ್ ರಾಜಕುಮಾರ್ ರವರ ಪ್ರಥಮ ವರ್ಷದ ಸ್ಮರಣಾರ್ಥವಾಗಿ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಮಾಡುತ್ತಿರುವುದು ಒಳ್ಳೆಯ ಸಮಾಜಮುಖಿ ಕೆಲಸ ಎಂದರು. ಪುನೀತ್ ರಾಜಕುಮಾರ್ ಅವರು ಜೀವನದಲ್ಲಿ ಮಾಡಿದಂತ ಒಳ್ಳೆಯ ಕೆಲಸಗಳು ನಾವು ಜೀವನದಲ್ಲಿ ರೂಪಿಸ್ಕೊಂಡು ಜೀವನ ಸಾಗಿಸಿದರೆ ಜೀವನ ಸಾರ್ಥಕ ಎಂದರು.

ಅದೇ ಸಮಯದಲ್ಲಿ ಶಾಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕ ನಾಡು ರಕ್ಷಣಾ ವೇದಿಕೆಯ ಸಂಸ್ಥಾಪಕರಾದ ಅಧ್ಯಕ್ಷರಾದ ಪ್ರಸನ್ನ ಗೌಡ್ರು ಮತ್ತು ಜಿಲ್ಲಾಧ್ಯಕ್ಷರಾದ ದಿನೇಶ ಎಸ್ ಎಂ ಜಿಲ್ಲಾ ಉಪಾಧ್ಯಕ್ಷ ಕುಬೇರ್ , ಜಿಲ್ಲಾ ಕಾರ್ಯದರ್ಶಿ ದಾಮೋದರ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಕೇತ್ ,ನಗರ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಮಂಜುನಾಥ್ ,ಎಸ್ ಬಸವರಾಜ ,ಮಂಜುನಾಥ , ಸಮೀವುಲ್ಲಾ ,ಕಾಂತರಾಜ ಸಚಿನ್ ಮತ್ತು ತೀರ್ಥಳ್ಳಿಯ ತಾಲೂಕು ಅಧ್ಯಕ್ಷ ಶಮಂತ್, ಘಟಕದ ಪದಾಧಿಕಾರಿಗಳು ಜೊತೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯ ಉಪ ಮೇಯರ್ ಆದ ಲಕ್ಷ್ಮಿ ಶಂಕರ್ ನಾಯಕ್ ಭಾಗಿಯಾಗಿದ್ದರು.

ವರದಿ ಪ್ರಜಾಶಕ್ತಿ…