ಶಿವಮೊಗ್ಗ ನಗರದ ಚನ್ನಪ್ಪ ಲೇಔಟ್ ನಲ್ಲಿ ಶರತ್ ಎಂಬುವವರು ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ದಿ 5ರಂದು ಅಪರಿಚಿತ ವ್ಯಕ್ತಿ ಮೊಬೈಲ್ ಎಸ್ಕೇಪ್ ಮಾಡಿದ್ದಾರೆ. ನಂತರ ಶರತ್ ರವರು ಹತ್ತಿರದ ಜಯನಗರದ ಪೊಲೀಸ್ ಠಾಣೆಗೆ ಪ್ರಕರಣ ದಾಖಲಿಸಿದ್ದಾರೆ.

ಜಯನಗರ ಇನ್ಸ್ಪೆಕ್ಟರ್ ಮಾದಪ್ಪ ಮತ್ತು ಅವರ ತಂಡ ನೇತೃತ್ವದಲ್ಲಿ ಶರತ್ ಎಂಬುವವರ ಮೊಬೈಲ್ ಫೋನ್ ಅನ್ನು ಕಿತ್ತುಕೊಂಡು ಹೋದ ಬಗ್ಗೆ ಸುಲಿಗೆ ಪ್ರಕರಣ ದಾಖಲಿಸಿಕೊಂಡು, ಸದರಿ ಪ್ರಕರಣದ ತನಿಖೆ ಕೈಗೊಂಡು, ದಿನಾಂಕಃ- 16-11-2022 ರಂದು ಆರೋಪಿ ಪ್ರಜ್ವಲ್ ಆರ್ @ ಪ್ರಜ್ಜು, 21 ವರ್ಷ, ಕಾಶಿಪುರ, ಶಿವಮೊಗ್ಗ ಮತ್ತು ಒಬ್ಬ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿತರಿಂದ ಜಯನಗರ ಪೊಲೀಸ್ ಠಾಣೆಯ 1 ಸುಲಿಗೆ, 1 ಮೊಬೈಲ್ ಕಳ್ಳತನ ಮತ್ತು 2 ದ್ವಿ ಚಕ್ರ ವಾಹನ ಕಳ್ಳತನ ಪ್ರಕರಣಗಳು ಸೇರಿ ಒಟ್ಟು 04 ಪ್ರಕರಣಗಳಿಗೆ ಸಂಬಂಧಿಸಿದ ರೂ 1,71,000/- ಮೌಲ್ಯದ 07 ಮೊಬೈಲ್ ಫೊನ್ ಗಳು ಮತ್ತು 03 ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಂಡಿರುತ್ತದೆ.

ವರದಿ ಪ್ರಜಾಶಕ್ತಿ…