ಶಿವಮೊಗ್ಗ ನಗರದ ಮಹಾನಗರ ಪಾಲಿಕೆ ಆವರಣದಲ್ಲಿರುವ ಬಯಲು ಬಸವಣ್ಣನಿಗೆ ಕಾರ್ತಿಕ ಮಾಸ ದೀಪೋತ್ಸವದ ಅಂಗವಾಗಿ ವಿಶೇಷ ಪೂಜೆ ಅತ್ಯಂತ ಅದ್ದೂರಿಯಾಗಿ ಜರುಗಿತು.

ಪೂಜಾ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮೇಯರ್ ಶ್ರೀ ಎಸ್ ಶಿವಕುಮಾರ್ ರವರು, ಉಪಮೇಯರ್ ಶ್ರೀಮತಿ ಲಕ್ಷ್ಮಿ ಶಂಕರ್ ನಾಯಕ ರವರು ಪಾಲಿಕೆ ಆಯುಕ್ತರಾದ ಶ್ರೀ ಮಾಯಣ್ಣ ಗೌಡರವರು ವಿರೋಧ ಪಕ್ಷದ ನಾಯಕಿ ಶ್ರೀಮತಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರುಗಳಾದ ಎಚ್ ಸಿ ಯೋಗೀಶ್ ರವರು, ನಾಗರಾಜ್ ಕಂಕಾರಿ ರವರು, ಆರ್ ಸಿ ನಾಯ್ಕರವರು, ಶಿರೀಶ್ ರವರು, ಮೂರ್ತಿರವರು, ಪೌರಕಾರ್ಮಿಕರ ಸಂಘದ ಅಧ್ಯಕ್ಷರಾದ ಮಾರಣ್ಣನವರು ಪ್ರಧಾನ ಕಾರ್ಯದರ್ಶಿಗಳಾದ ಗೋವಿಂದಣ್ಣನವರು, ಪಾಲಿಕೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಸವಣ್ಣನಿಗೆ ದೀಪ ಬೆಳಗಿ ದೀಪ ಹಚ್ಚಿದರು.

ವರದಿ ಪ್ರಜಾಶಕ್ತಿ…