ಶಿವಮೊಗ್ಗದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ 95 ವರ್ಷಗಳ ಇತಿಹಾಸವುಳ್ಳ ದುರ್ಗಿಗುಡಿ ಶ್ರೀ ಸೀತಾರಾಮ ಆಂಜನೇಯ ದೇವಸ್ಥಾನದಲ್ಲಿ ಕಡೆ ಕಾರ್ತಿಕ ದೀಪೋತ್ಸವ ನಡೆಯಿತು.

ಪ್ರತಿ ವರ್ಷದಂತೆ ಈ ವರ್ಷವೂ ಕಡೆ ಕಾರ್ತಿಕ ದೀಪೋತ್ಸವದಲ್ಲಿ ಪಲ್ಲಕ್ಕಿ ಉತ್ಸವ , ದೀಪುತ್ಸವ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯಿತು. ಸೀತಾರಾಮ ಗೆಳೆಯರ ಬಳಗ ವತಿಯಿಂದ ಪಟಾಕಿ ಸಿಡಿಸಿ ಕಡೆ ಕಾರ್ತಿಕ ದೀಪೋತ್ಸವಕ್ಕೆ ಮೆರಗು ತಂದರು.
ಈ ಸಂದರ್ಭದಲ್ಲಿ ದೇವಾಲಯದ ಅರ್ಚಕರಾದ ಜಯತೀರ್ಥ ಆಚಾರ್ , ಟಿ. ನಾಗರಾಜ್ ಶೆಟ್ಟಿ , ಅಕ್ಷಯ್ , ಗುರುರಾಜ್ ,ವೆಂಕಟೇಶ್ ,ವಾದಿರಾಜ್ , ಅನಂತ್ ರಾಮ್ , ಸಂದೇಶ ,ತರುಣ್ , ವಿನಯ್ , ವಿಕಾಸ್ , ಶರದಿ ಅತುಲ್ ಮುಂತಾದವರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…