50ನೇ ವರ್ಷದ ಶಬರಿಮಲೆ ಯಾತ್ರೆ…

ಶಿವಮೊಗ್ಗದ ಹಿರಿಯ ಗುರುಸ್ವಾಮಿ ಗಳಲ್ಲಿ ಒಬ್ಬರಾದ ಶ್ರೀ ಕೃಷ್ಣ ಶೆಟ್ಟಿ ಗುರುಸ್ವಾಮಿಯವರು ಈ ವರ್ಷ 50ನೇ ಶಬರಿಮಲೆ ಯಾತ್ರೆಯನ್ನು ಕೈಗೊಂಡಿದ್ದಾರೆ.ಗಾಂಧಿ ಬಜಾರ್ ನಲ್ಲಿರುವ ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ವತಿಯಿಂದ ಅವರಿಗೆ ಸನ್ಮಾನಿಸಿದರು.

ಅವರ ಶಬರಿಮಲೆ ಯಾತ್ರೆಗೆ ಶುಭವಾಗಲಿ ಎಂದು ಶಿವಮೊಗ್ಗ ಬಂಟರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಸಾರ್ವಜನಿಕ ಶ್ರೀ ಅಯ್ಯಪ್ಪ ಸ್ವಾಮಿ ದೇವಾಲಯದ ಸಮಿತಿಯ ಸದಸ್ಯರು ಶುಭ ಹಾರೈಸಿದರು.