ನಗರದ ಸ್ಟೇಡಿಯಂ ಸರ್ಕಲ್ ನಲ್ಲಿ ಯೂತ್ ಕಾಂಗ್ರೆಸ್ ವತಿಯಿಂದ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು . ಈ ಸಂದರ್ಭದಲ್ಲಿ ಮಾತನಾಡಿದ ಗಿರೀಶ್ ರವರು ಕೇಂದ್ರ ಸರ್ಕಾರದವರು ಲಸಿಕೆಯನ್ನು ರಫ್ತು ಮಾಡಿದ್ದಾರೆ ನಮಗೆ ಲಸಿಕೆ ಇಲ್ಲ ನಮ್ಮ ಮಕ್ಕಳಿಗೆ ಕೊಡಬೇಕಾದ ಲಸಿಕೆಯನ್ನು ಹೊರ ದೇಶಗಳಿಗೆ ರಫ್ತು ಮಾಡಿದ್ದರೆ ಇದು ಯಾವ ರೀತಿಯ ನ್ಯಾಯ . ಇದರ ವಿರುದ್ಧ ಪ್ರತಿಭಟಿಸಿದ ಹದಿನೈದು ಜನ ಯೂತ್ ಕಾಂಗ್ರೆಸ್ ಕಾರ್ಯಕರ್ತರನ್ನು ರನ್ನು ಕೇಂದ್ರ ಸರ್ಕಾರ ಬಂಧಿಸಿದೆ. ಹಾಗಿದ್ದರೆ ನೀವು ಮಾಡಿದ ತಪ್ಪುಗಳನ್ನು ಪ್ರಶ್ನೆಮಾಡುವ ಎಲ್ಲರನ್ನು ಬಂಧಿಸುತ್ತೀರಾ ? ದೇಶಾದ್ಯಂತ ಯುವಕರು ಪ್ರಶ್ನೆ ಮಾಡೇ ಮಾಡುತ್ತಾರೆ. ನಮ್ಮನ್ನು ಬಂಧಿಸಿ. ಎಲ್ಲಕ್ಕಿಂತ ಮೊದಲು ನಿಮ್ಮ ನಿರ್ಲಕ್ಷ್ಯತನವನ್ನು ಬಿಟ್ಟು ಎಲ್ಲರಿಗೂ ಲಸಿಕೆ ಕೊಡುವ ಬಗ್ಗೆ ಯೋಚಿಸಿ ಎಂದು ಸರ್ಕಾರದ ವಿರುದ್ಧ ಗುಡುಗಿದರು. ಈ ಸಂದರ್ಭದಲ್ಲಿ ಯೂತ್ ಕಾಂಗ್ರೆಸ್ ನ ಹೆಚ್ ಸಿ ಯೋಗೇಶ್ , ರಂಗನಾಥ್ , ಕಿರಣ್ , ಪ್ರವೀಣ್ ಕುಮಾರ್ ಮುಂತಾದವರಿದ್ದರು
ವರದಿ ಮಂಜುನಾಥಶೆಟ್ಟಿ ಶಿವಮೊಗ್ಗ