ತೂದೂರು ನ್ಯೂಸ್…

ತೀರ್ಥಹಳ್ಳಿ ತಾಲೂಕು ತೂದುರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಧುರಾಜ್ ಹೆಗಡೆ ನೇತೃತ್ವದಲ್ಲಿ ಅದ್ದೂರಿ 67 ಕನ್ನಡ ರಾಜ್ಯೋತ್ಸವ ಹಾಗೂ “ರಾಷ್ಟ್ರ ಕವಿ ಕುವೆಂಪು” ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರೊಂದಿಗೆ ಸಂಸದರಾದ ಬಿ. ವೈ ರಾಘವೇಂದ್ರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶಿಕ್ಷಣಾಧಿಕಾರಿ ಆನಂದ್, ಕವಿರಾಜ್, ದೇವರಾಜು ಅರಸ್ ನಿಗಮದ ಸದಸ್ಯರಾದ ಮಾಲತೇಶ್, ತೂದುರು ಗ್ರಾ. ಪಂ ಅಧ್ಯಕ್ಷರಾದ ಹಾಗೂ ಬಂಟರ ಸಮುದಾಯದ ಮುಖಂಡರು ಮಧುರಾಜ್ ಹೆಗಡೆ, ಗ್ರಾಮ ಪಂಚಾಯಿತಿಯ ಸದಸ್ಯರು, ಶಾಲೆಯ ಮುಖ್ಯೋಪಾಧ್ಯಾಯರಾದ ಜಯಪ್ಪ, ಉಮೇಶ್, ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿಯ ಸದಸ್ಯರು ಮತ್ತಿತರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…