ಕುವೈತ್ ನ್ಯೂಸ್…

ಕುವೈತ್ ನಲ್ಲಿ, ಅನಿವಾಸಿ ಕನ್ನಡಿಗರು ಆಯೋಜಿಸಿರುವ ಎರಡು ದಿನಗಳ, ಕನ್ನಡ ರಾಜ್ಯೋತ್ಸವ ಸಮಾರಂಭ, ” ಕನ್ನಡ ಡಿಂಡಿಮ” ದ ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರ ಗೃಹ ಸಚಿವ ಆರಗ ಜ್ಞಾನೇಂದ್ರ ರವರು ಅತಿಥಿಗಳಾಗಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ,
ಖ್ಯಾತ ಯಕ್ಷಗಾನ ಕಲಾ ವಿದ, ಶ್ರೀ ರಫೀಕ್ಉದ್ದಿನ್ ಅವರನ್ನು, ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ರವರು,ಇಂದು, ಕರ್ಮಯೋಗಿ ಎಂಬ ಬಿರುದನ್ನು ನೀಡಿ, ಸನ್ಮಾನಿಸಿದರು.

ಭಾರತಿಯ ಪ್ರವಾಸಿ ಪರಿಷತ್, ಕುವೈತ್ ಕರ್ನಾಟಕ ಘಟಕದ ಅಧ್ಯಕ್ಷರಾದ ಶ್ರೀ ರಾಜ್ ಭಂಡಾರಿ(ಶೆಟ್ಟಿ), ಉಪಾಧ್ಯಕ್ಷ ಶ್ರೀ ಚಿತ್ತರಂಜನ್, ಭಾರತೀಯ ರಾಯಭಾರಿ ಕಚೇರಿ ಅಧಿಕಾರಿ, ಶ್ರೀ ಕಮಲ್ ಸಿಂಗ್ ರಾಥೋರ್, ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…