ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯ ನಾಗರಿಕರ ಹಲವು ವರ್ಷಗಳ ಬೇಡಿಕೆಯಾದ ರಾಜಕಾಲುವೆ ಪುನರ್ ನಿರ್ಮಾಣಕ್ಕೆ ಇಂದು ಶಾಸಕರ ಸ್ಥಳೀಯ ಅಭಿವೃದ್ಧಿ ಅನುದಾನ 1.5 ಕೋಟಿ ರೂ ವೆಚ್ಚದ 400 ಮೀಟರ್ ಕಾಲುವೆ ಕಾಮಗಾರಿಗೆ ಮಾಜಿ ಉಪ ಮುಖ್ಯಮಂತ್ರಿಗಳು , ಹಾಲಿ ಶಾಸಕರಾದ ಕೆ ಎಸ್ ಈಶ್ವರಪ್ಪನವರು ಗುದ್ದಲಿ ಪೂಜೆಯನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕಿ ಹಾಗೂ ವಾರ್ಡಿನ ಸದಸ್ಯೆ ರೇಖಾರಂಗನಾಥ್,ಉಪಮೇಯರ್ ಲಕ್ಷ್ಮಿಶಂಕರ್ ನಾಯ್ಕ,. ಸೂಡಾ ಅಧ್ಯಕ್ಷರಾದ ನಾಗರಾಜ್ ಪಾಲಿಕೆಯ ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಆಯುಕ್ತರಾದ ಮಾಯಣ್ಣಗೌಡ, ಪಾಲಿಕೆಯ ನಿಕಟಪೂರ್ವ ಮೇಯರ್ ಸುನೀತಾ ಅಣ್ಣಪ್ಪ, ನಿಕಟ ಪೂರ್ವ ಉಪಮೇಯರ್ ಶಂಕರ್ ಗನ್ನಿ ,ಸ್ಥಳೀಯ ಜನಪ್ರತಿನಿಧಿಗಳು , ಹಾಗೂ ಬಡಾವಣೆಯ ಗೌರವಾನ್ವಿತ ನಾಗರಿಕರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…