ಶಿವಮೊಗ್ಗ ವಿದ್ಯಾನಗರದ “ಪ್ರೇರಣಾ ರಕ್ತದಾನಿಗಳ ಬಳಗ”ವು “ಭಾರತೀಯ ರೆಡ್ ಕ್ರಾಸ್ ಸೊಸೈಟಿ” ಹಾಗೂ “ಸಂಜೀವಿನಿ ರಕ್ತ ನಿಧಿ” ಸಹಯೋಗದಲ್ಲಿ ವಿದ್ಯಾನಗರದ “ಶ್ರೀ ಚೌಡೇಶ್ವರಿ ಸಮುದಾಯ ಭವನ”ದಲ್ಲಿ ಏರ್ಪಡಿಸಿದ್ದ “ಸ್ವಯಂ ಪ್ರೇರಿತ ರಕ್ತದಾನ ಶಿಬಿರ” ಕಾರ್ಯಕ್ರಮದಲ್ಲಿ ಸೂಡಾದ ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಎಸ್.ಎಸ್. ಜ್ಯೋತಿಪ್ರಕಾಶ್ ಅವರು ವಿಶೇಷ ಆಹ್ವಾನದ ಮೇರೆಗೆ ಭೇಟಿ ನೀಡಿ ಭಾರತ ಮಾತೆಗೆ ಪುಷ್ಪ ನಮನ ಸಲ್ಲಿಸಿ ಶಿಬಿರಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ರೆಡ್ ಕ್ರಾಸ್ ಸಂಜೀವಿನಿಯ ಶ್ರೀ ದಿನಕರ್ ಅವರು, ಪ್ರಮುಖರಾದ ಶ್ರೀ ಎಸ್.ಕೆ. ರಾಘವೇಂದ್ರ ಅವರು, ಶ್ರೀ ಸುಧೀಂದ್ರ ಅವರು, ಶ್ರೀ ದುರ್ಗಾ ಪ್ರಸಾದ್ ಅವರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ ಪ್ರಜಾಶಕ್ತಿ…