ಕರ್ನಾಟಕ ಸರ್ಕಾರದ ನಿಕಟಪೂರ್ವ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ ಅವರು ಮೊಟ್ಟ ಮೊದಲ ಬಾರಿ ನಟಿಸಿರುವ ರಾಜ್ಯ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಹರೀಶ್ ಎಂ.ಡಿ.ಹಳ್ಳಿ ಅವರ ನಿರ್ದೇಶನ, ಮಧು ಕಲ್ಯಾಣ್ ಹಾಗೂ ಸ್ನೇಹಿತರ ನಿರ್ಮಾಣದ ನೈಜ ಘಟನೆ ಆಧಾರಿತ ಚಲನಚಿತ್ರ “ತನುಜಾ” ಚಿತ್ರದ ಟ್ರೈಲರ್ ಬಿಡುಗಡೆಯಾಗಿದ್ದು ಗ್ರಾಮೀಣ ರೈತ ಕುಟುಂಬದ ಹೆಣ್ಣುಮಗಳ ಸಾಧನೆಯ ನೈಜ ಚಿತ್ರವಾಗಿದ್ದು ಎಲ್ಲರೂ ವೀಕ್ಷಿಸಿ ಲೈಕ್ ಮಾಡಿ ಹೆಚ್ಚು ಶೇರ್ ಮಾಡಿ ಚಿತ್ರತಂಡ ತಿಳಿಸಿದ್ದಾರೆ.

ನಾಡಿನ ವಿದ್ಯಾರ್ಥಿಗಳು, ಪೋಷಕರು ನೋಡಿ ಪ್ರೇರಣೆ ಹಾಗೂ ಹೆಮ್ಮೆಪಡುವ ಚಿತ್ರ ಇದಾಗಿದ್ದು ಶೀಘ್ರದಲ್ಲೇ ತೆರೆಯಮೇಲೆ ಚಲನಚಿತ್ರ ಬರಲಿದ್ದು ತಮ್ಮೆಲ್ಲರ ಬೆಂಬಲ ಪ್ರೋತ್ಸಾಹವಿರಲಿ ಎಂದರು.ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಕೆ.ಸುಧಾಕರ್ ಅವರು ಹಾಗೂ ಹಿರಿಯ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರೂ ಸಹ ನಟಿಸಿದ್ದಾರೆ.

ವರದಿ ಪ್ರಜಾಶಕ್ತಿ…