ಖ್ಯಾತ ಗಮಕ ಕಲಾವಿದರೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರೂ ಆಗಿದ್ದ ಶಿವಮೊಗ್ಗದ, ಶ್ರೀ ಹೊಸಳ್ಳಿ ಕೇಶವ ಮೂರ್ತಿ ರವರು, ನಿಧನರಾದ ಸುದ್ದಿ ತಿಳಿದು ಅಪಾರ ದುಃಖವಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಗಮಕ ಕಲಾ ಪ್ರಪಂಚಕ್ಕೆ, ತಮ್ಮದೇ ಆದಂತಹ ವಿಶಿಷ್ಟ ಕೊಡುಗೆ ನೀಡಿರುವ ಶ್ರೀಯುತರು, ಅಪಾರ ಪ್ರಮಾಣದ ಶಿಷ್ಯರನ್ನೂ, ಕಲಾ ಅಭಿಮಾನಿಗಳನ್ನು ಹಾಗೂ ಬಂಧು ಬಳಗವನ್ನು, ಅಗಲಿದ್ದಾರೆ.

ನನ್ನ ಮತ ಕ್ಷೇತ್ರದವರಾಗಿ ನನ್ನ ಸಾರ್ವಜನಿಕ ಬದುಕಿಗೆ ಮಾರ್ಗದರ್ಶನ ಮಾಡಿದ್ದ ಶ್ರೀಯುತರ
ಆತ್ಮಕ್ಕೆ ಚಿರಶಾಂತಿ ದೊರಕಲಿ ಹಾಗೂ ಅವರ ಕುಟುಂಬ ವರ್ಗಕ್ಕೆ ದುಃಖವನ್ನು ಭರಿಸುವ ಶಕ್ತಿ ಕೊಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ವರದಿ ಪ್ರಜಾಶಕ್ತಿ…