ಇಂದು ಸಾಗರ ಮಹಿಳಾ ಸಮಾಜದ ಕಟ್ಟಡದ ಭಾಗದಲ್ಲಿ ಮಾನ್ಯ ವಿಧಾನ ಪರಿಷತ್ ಸದಸ್ಯರಾದ(MLC) ಆರ್,ಪ್ರಸನ್ನಕುಮಾರ್ ಅವರು ಸರ್ಕಾರದಿಂದ ಕಾರ್ಮಿಕ ಇಲಾಖೆಯ ಅನುದಾನದ ಸುಮಾರು 200 ಕಿಟ್ ಗಳನ್ನು ಸಾಗರದಲ್ಲಿ ಮಾನ್ಯ ಮಾಜಿ ಸಚಿವರು, ಮಾಜಿ ವಿಧಾನಸಭಾಧ್ಯಕ್ಷರು ಆದ ಕಾಗೋಡು ತಿಮ್ಮಪ್ಪನವರ ಸಮ್ಮುಖದಲ್ಲಿ, ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ,ಆರ್,ಜಯಂತ್ ಅಧ್ಯಕ್ಷತೆಯಲ್ಲಿ ಕಟ್ಟಡ ಕಾರ್ಮಿಕರಿಗೆ ನೀಡಿದರು. ಈ ಸಂಧರ್ಭದಲ್ಲಿ ಮಾಜಿ ಜಿಲ್ಲಾಧ್ಯಕ್ಷರಾದ ತೀ,ನ,ಶ್ರೀನಿವಾಸ್,ಕೆಪಿಸಿಸಿ ರಾಜ್ಯ ಕಾರ್ಯದರ್ಶಿಯಾದ ಡಾ!! ರಾಜನಂದಿನಿ ಕಾಗೋಡು, ನಗರ ಕಾಂಗ್ರೆಸ್ ಘಟಕದ ಅಧ್ಯಕ್ಷರಾದ ಐ,ಎನ್,ಸುರೇಶ್ ಬಾಬು, ಜಿಲ್ಲಾ ವೀಕ್ಷಕರು, ಮಾಜಿ ಜಿ.ಪಂ.ಸದಸ್ಯರಾದ ಕಲಗೋಡು ರತ್ನಾಕರ್, ಮಾಜಿ ತಾ.ಪಂ.ಅಧ್ಯಕ್ಷರಾದ ಮಲ್ಲಿಕಾರ್ಜುನ್ ಹಕ್ರೆ, ಎಪಿಎಂಸಿ ಮಾಜಿ ಅಧ್ಯಕ್ಷರಾದ ಹೊಳಿಯಪ್ಪ, ನಗರಮಹಿಳಾ ಅಧ್ಯಕ್ಷರು, ಸದಸ್ಯರು ಆದ ಮಧು ಮಾಲತಿ, ನಗರಸಭೆ ಸದಸ್ಯರಾದ ಲಲಿತಮ್ಮ,OBC ಘಟಕದ ತಾಲ್ಲೂಕು ಅಧ್ಯಕ್ಷರಾದ ರಮೇಶ್ ಮರಸ,ತುಕಾರಾಂ ಶಿರವಾಳ, ನಗರ SC ಘಟಕದ ಅಧ್ಯಕ್ಷರಾದ ಚಂದ್ರಪ್ಪ, ವಕೀಲರಾದ ಜಕ್ರಿಯಾ, ಕಾರ್ಯದರ್ಶಿಯಾದ ಮೈಕಲ್ ಡಿಸೋಜಾ, ಪ್ರಧಾನ ಕಾರ್ಯದರ್ಶಿಯಾದ ಮಾಬಲೇಶ್ ಕೌತಿ, ಗ್ರಾ.ಪಂ ಸದಸ್ಯರಾದ ವೆಂಕಟೇಶ್ ಮೆಳವರಿಗೆ,ಲೊಹಿತ್ ಶಿರವಾಳ,ಸುಧಾಕರ್ ಕುಗ್ವೆ ಕೆಪಿಸಿಸಿಸಾಮಾಜಿಕಜಾಲತಾಣದ ಸಂಜಯ್, ಸದ್ದಾಂ ಹಾಗು ಹಲವರು ಉಪಸ್ಥಿತರಿದ್ದರು .

ವರದಿ ಮಂಜುನಾಥ್ ಶೆಟ್ಟಿ ಶಿವಮೊಗ್ಗ

ಶಿವಮೊಗ್ಗ ಜಿಲ್ಲೆಯ ಸುದ್ದಿ ನೀಡಲು ಕರೆ ಮಾಡಿ ಅಥವಾ ವಾಟ್ಸಪ್ ಮಾಡಿ 9611584153