ಪ್ರಸನ್ನ ತೆಗೆದು ಕಳಿಸಿದ ಈ ಫೋಟೋಗಳು ಮಾತ್ರ ನನ್ನ ಪಾಲಿಗೆ,,,
ಎಲ್ಲೇ ಸಿಗಲಿ ಅಣ್ಣಾ ನೀವು ತಲೆ ಕೆಡಸಕೋಬೇಡಿ ನಿಮ್ಮ ಬಾಸಿಂದು ಒಳ್ಳೋಳ್ಳೇ ಫೋಟೋ ತೆಗೆದು ಕಳಿಸುವೆ, ನಂದು ಸೂಪರ್ ಕ್ವಾಲಿಟಿ ಕ್ಯಾಮರಾ ಅಣ್ಣಾ, ನೀವು ನಿಮ್ಮ ಕೆಲಸ ಮಾಡಿಕೊಳ್ಳಿ ಫೋಟೋ ಕೆಲಸ ನಂಗ ಬಿಡಿ ಎಂದು ಹೇಳಿ, ನಾವು ಒಟ್ಟಾದ ಎಲ್ಲಾ ಕಾರ್ಯಕ್ರಮದಲ್ಲಿ ಹತ್ತಾರು ಫೋಟೋ ತೆಗೆದು ಕಳಿಸಿ ನನ್ನ ಕಾರ್ಯದೊತ್ತಡವನ್ನು ಕಡಿಮೆ ಮಾಡುತ್ತಿದ್ದ,ಮುಗ್ದ ಮನಸ್ಸಿನ ಹುಡುಗಾಟದ ಒಳ್ಳೆಯದು ಕೆಟ್ಟದ್ದರ ಬಗ್ಗೆ ಬಹಳ ಯೋಚಿಸದೇ ತನ್ನ ಪಾಡಿಗೆ ತನ್ನ ಕರ್ತವ್ಯ ನಿರ್ವಹಿಸಿಕೊಂಡು ಹೋಗುತ್ತಿದ್ದ ಗೆಳೆಯ ಪ್ರಸನ್ನ ಮರಳಿ ಬಾರದೂರಿಗೆ ಪ್ರಯಾಣಿಸಿದ ಸುದ್ದಿ ಕೇಳಿ ಕಣ್ಣಾಲಿಗಳು ತೇವಗೊಂಡಿದ್ದಲ್ಲದೇ ದುಖಃ ತಡೆಯಲಾಗದ ಸ್ಥಿತಿ ನನ್ನದು,

ಜಾತ್ರೆ ತೆಪ್ಪೋತ್ಸವದ ದಿನ ತೀರ್ಥಹಳ್ಳಿಗೆ ಸಂಸದರೊಂದಿಗೆ ಬಂದಿದ್ದ ಗೆಳೆಯನ ಭೇಟಿ ಅದೇ ಕೊನೇ ಯಾಗುತ್ತದೆ ಎಂದು ಯಾರಾದರೂ ಅಂದಾಜಿಸಿದ್ದೀವಾ,

ಬಾಳಿ ಬದುಕಬೇಕಾದ ಹುಡುಗನನ್ನು ಭಗವಂತ ಇಷ್ಟು ಬೇಗ ಕರೆದುಕೊಂಡನಲ್ಲಾ ಓಂ ವಿಧಿಯೇ ನಿನೆಷ್ಟು ಕ್ರೂರ,

ಸುಂದರ ಮುಖದ ಮರೆಯಲಾರದ ಮುಖದ ಯಾವಾಗಲೂ ಮುಖದಲ್ಲಿ ಪ್ರಸನ್ನತೆಯನ್ನೇ ಹೊತ್ತಿರುತ್ತಿದ್ದ ಗೆಳೆಯ ಪ್ರಸನ್ನ ನೀ ನಮ್ಮಿಂದ ದೂರಾದರೂ ನೀನು ತೆಗೆದ ಸಾವಿರ ಸಾವಿರ ಚಿತ್ರಗಳು ನಿನ್ನನ್ನು ನೆನಪಿನ ಸ್ಮರ್ತಿ ಪಟಲದಿಂದ ಎಂದೇಂದೂ ನೀನು ದೂರವಾಗಲು ಬಿಡಲಾರವು,

ನನಗಂತೂ ಈ 2023 ರ ಜನವರಿ ಒಂದನ್ನೂ ನೀನೂ ಸದಾ ನೆನಪಿಸುವಂತೆ ಮಾಡಿ ಬಿಟ್ಟಿಯಲ್ಲೊ ಗೆಳೆಯ,

ಆಡಿಸುವಾತ ಬೇಸರ ಮೂಡಿ ನಿನ್ನ ಆಟವನ್ನು ಇಷ್ಟು ಬೇಗ ಮುಗಿಸಿದ್ದಕ್ಕೇ ಆಡಿಸುವಾತನ ಮೇಲೆ ನನಗೆ ತುಂಬಾ ಸಿಟ್ಟಿದೆ ಕಣೋ ಗೆಳೆಯ,
ಫೋಟೋ ತೆಗೆಯುವ ನಿನ್ನ ಚತುರತೆ ಸ್ವರ್ಗದಲ್ಲೂ ವಿರಾಜಿಸಲಿ
ತೆಗೆದ ಫೋಟೋಗಳನ್ನು ನನಗೆ ಕಳಿಸುವುದನ್ನು ಮರೆಯದಿರು ಗೆಳೆಯ,
ನೀ ಕಳಿಸುವ ಫೋಟೋಗಳಿಗೆ ಕಾಯುತ್ತಿರುತ್ತೇನೆ

ಹೊದಲ ಬಸವರಾಜ…ಗೃಹ ಸಚಿವ ಆಪ್ತ ಸಹಾಯಕರು…