ಕರ್ನಾಟಕ ರಾಜ್ಯ ಪತ್ರಿಕ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ 2023 ಹೊಸ ವರ್ಷದ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮವನ್ನು ಭದ್ರಾವತಿಯ ಲಯನ್ಸ್ ಕ್ಲಬ್ಬಿನ ಸರ್ ಎಂ ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭದ್ರಾವತಿಯ ಆರ್ ಎಸ್ ಎಸ್ ನ ಸಂಚಾಲಕರಾಗಿರುವ ಶ್ರೀಯುತ ಮಧುಕರ್ ಕಾರ್ಣಿಕರ್ ರವರು ಹಾಗೂ ವಿಜಯ ಕರ್ನಾಟಕ ಪತ್ರಿಕೆಯ ವರ್ದಿಗಾರರಾಗಿರುವ ಶ್ರೀಯುತ ಬಾಬು , ಕನ್ನಡ ಪ್ರಭ ಪತ್ರಿಕೆ ವರದಿಗಾರರಾಗಿರುವ ಸೀತಾ ಅನಂತ ರವರು ಲೈನ್ಸ್ ಕ್ಲಬ್ ಇನ ಕಾರ್ಯದರ್ಶಿಯಾಗಿರುವ ಮಲ್ಲಿಕಾರ್ಜುನ್ ರವರು ಕಾರ್ಮಿಕ ಹಕ್ಕು ಹೋರಾಟಗಾರರಾಗಿರುವ ಶ್ರೀಯುತ ಮಂಜು ಜಿ ರಾವ್ ಹಾಗೂ ಕರ್ನಾಟಕ ರಾಜ್ಯ ಪತ್ರಿಕೆ ವಿತರಕರ ಒಕ್ಕೂಟ ಶಿವಮೊಗ್ಗ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಶ್ರೀಯುತ ಮುಕ್ತಾರ್ ಅಹಮದ್ (ನಜೀರ್) ಆಗಮಿಸಿದ್ದರು.

ಭದ್ರಾವತಿಯ ಪತ್ರಿಕ ವಿತರಕರುಗಳಾದ ಪ್ರಸನ್ನ ಕುಮಾರ್ ಪರಶುರಾಮ್ ರಾವ್ ಯತೀಶ್ ಕುಮಾರ್ ಎಂ ಮಾಧವ ಎಸ್ ಸತ್ಯನಾರಾಯಣ ಸೋಮಶೇಖರ್ ಅರಳೆಹಳ್ಳಿ ಹಾಗೂ ಇನ್ನು ಇತರರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ವರದಿ ಪ್ರಜಾಶಕ್ತಿ…