ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಕೆ.ಬಿ ಅಶೋಕ ನಾಯ್ಕ ರವರು ಆನವೇರಿಯ ಶ್ರೀ ದುರ್ಗಮ್ಮ ದೇವಿ, ಶ್ರೀ ಮಾತಂಗೆಮ್ಮ ದೇವಿ ಹಾಗೂ ಶ್ರೀ ಭೂತಪ್ಪ ಸ್ವಾಮಿಯ ನೂತನ ದೇವಾಲಯಗಳ ಗೃಹ ಪ್ರವೇಶ, ಶಿಲಾಮೂರ್ತಿಗಳ ಪ್ರತಿಷ್ಠಾಪನೆ, ಗೋಪುರ ಕಳಾಸರೋಹಣ ಕಾರ್ಯಕ್ರಮದಲ್ಲಿ ಶ್ರೀ ಡಾ.ಬಸವ ಮರುಳ ಸಿದ್ದ ಸ್ವಾಮಿಗಳು ಬಸವ ಕೇಂದ್ರ, ಶ್ರೀ ಪೂರ್ಣಾನಂದ ಭಾರತಿ ಸ್ವಾಮಿಗಳು ಹಂಪಿ ಇವರ ಸಮ್ಮುಖದಲ್ಲಿ ಪಾಲ್ಗೊಂಡು ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಜಗದೀಶ್ ಗೌಡ್ರು, ಎ.ಕೆ ಮಹದೇವಪ್ಪ, ಬಸವರಾಜಪ್ಪ, ತಿಪ್ಪೇಶ್, ಹಾಗೂ ಗ್ರಾಮಸ್ಥರು ದೇವಸ್ಥಾನ ಸಮಿತಿಯವರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…