ಶಿವಮೊಗ್ಗದ ಸಹ್ಯಾದ್ರಿ ಸಂಘದ ವತಿಯಿಂದ ಇಂದು ನೆಹರು ಕ್ರೀಡಾಂಗಣ ಗೇಟಿಗೆ ಬೀಗ ಜಡಿದು ಪ್ರತಿಪಡಿಸಿದರು.

ನಗರದ ಹೃದಯ ಭಾಗದಲ್ಲಿರುವ ನೆಹರು ಕ್ರೀಡಾಂಗಣದಲ್ಲಿ ಸಾರ್ವಜನಿಕರಿಗೆ ಕುಡಿಯಲು ನೀರು , ಶೌಚಾಲಯ ಯಾವುದೇ ರೀತಿಯ ಉಪಯೋಗಗಳಿಲ್ಲ ಎಂದು ಸಾರ್ವಜನಿಕರು , ಸಹ್ಯಾದ್ರಿ ಸ್ನೇಹ ಸಂಘದವರು ಅಧಿಕಾರಿಗಳಿಗೆ ಧಿಕ್ಕಾರ ಕೂಗಿ ಗೇಟಿಗೆ ಬೀಗ ಹಾಕಿ ಪ್ರತಿಭಟಿಸಿದರು. ಅಧಿಕಾರಿಗಳು ಬರುವವರೆಗೆ ಯಾವುದೇ ಕಾರಣಕ್ಕೂ ನೀಡಿದ ಬೀಗ ತೆಗೆಯುವುದಿಲ್ಲ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಸಾರ್ವಜನಿಕರು ಸಹ್ಯಾದ್ರಿ ಸ್ನೇಹ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…