ಶಿವಮೊಗ್ಗ ನಗರದ ಮೂರನೇ ವಾರ್ಡಿನ ತ್ರಿಮೂರ್ತಿ ನಗರದಲ್ಲಿರುವ ತ್ರಿಮೂರ್ತಿ ನಗರದ ಮುಖ್ಯ ರಸ್ತೆ ಮತ್ತು ಬಾಕ್ಸ್ ಚರಂಡಿ ನಿರ್ಮಾಣಕ್ಕೆ ಸುಮಾರು 65 ಲಕ್ಷ ರೂಗಳ ಕಾಮಗಾರಿಗೆ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರು ಹಾಗೂ ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಯುತ ಧೀರರಾಜ್ ಹೊನ್ನವಿಲೆ ಯವರು ಸಾಂಕೇತಿಕವಾಗಿ ಗುದ್ದಲಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಅಂಬೇಡ್ಕರ್ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಗಾರೆ ನಾಗಣ್ಣ, ವಾರ್ಡ್ ಅಧ್ಯಕ್ಷರಾದ
ಕೆ ಇ ಬಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಗಳಾದ ಬೀರಪ್ಪ, ಬೂತ್ ಅಧ್ಯಕ್ಷರಾದ ಅನಿತಾ ಪ್ರಮುಖರಾದ ಕರಿಬಸಮ್ಮ, ಕೃಷ್ಣಪ್ಪ, ಉಮಾದೇವಿ, ಲಲಿತಮ್ಮ , ಭುವನೇಶ್ವರ್, ನಾಗರಾಜ್, ಗುತ್ತಿಗೆದಾರರಾದ ಮಂಜುನಾಥ್ ಹಾಗೂ ಇನ್ನೂ ಮುಂತಾದ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…