ಶಿವಮೊಗ್ಗ ಮಹಾನಗರ ಪಾಲಿಕೆಯ ಮುಂಬಗದಲ್ಲಿರುವ ಡ್ರೈನೇಜ್ ಸತತ ಒಂದು ತಿಂಗಳಿಂದ ಡ್ರೈನೇಜ್ ಓಪನ್ ಆಗಿದ್ದು ಇದರಿಂದ ಸಾರ್ವಜನಿಕರಿಗೇ ತುಂಬಾ ಕಿರಿಕಿರಿ ಉಂಟಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ಅಧ್ಯಕ್ಷ ಮಧುಸೂದನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದಿನನಿತ್ಯ ನಗರದಲ್ಲಿ ಅದರಲ್ಲೂ ಮಹಾನಗರ ಪಾಲಿಕೆ ಮುಂದಿರುವ ರಸ್ತೆಯಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತಿದ್ದು ತಿಂಗಳು ಕಳೆದರೂ ಅಧಿಕಾರಿಗಳು ಕೆಲಸವನ್ನು ನಿರ್ಲಕ್ಷಿಸಿ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿದೆ.ಈ ವಿಚಾರವನ್ನು ಕರವೇ ಸ್ವಾಭಿಮಾನೀ ಬಣವು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶವನ್ನು ವ್ಯಕ್ತ ಪಡಿಸಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಕೊಳ್ಳದಿದ್ದಲ್ಲಿ ಮುಂದೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಕರವೇ ಸ್ವಾಭಿಮಾನಿ ಬಣದ ಜಿಲ್ಲಾದ್ಯಕ್ಷರಾದ ಮಧುಸೂದನ್. ಉಸ್ತುವಾರಿ ಗಳಾದ ರವಿಪ್ರಸಾದ್. ಉಪಾಧ್ಯಕ್ಷರಾದ ನ್ಯಾಯಾಜ್. ಹಾಗೂ ರಘು. ಕಾರ್ಯರ್ಶಿ ನೂರುಲ್ಲ.ಲಿಂಗಣ್ಣ. ಸುನಿಲ್. ಇಂದ್ರೇಶ್. ಉಪಸ್ಥಿತರಿದ್ದರು.

ವರದಿ ಪ್ರಜಾ ಶಕ್ತಿ…