ಬೆಂಗಳೂರಿನ ನಾಗರಬಾವಿ ಹತ್ತಿರ ಮಾಳಗಾಳಾದಲ್ಲಿ ಇರುವ ಮಧು ಕಾಂಡಿಮೆಂಟ್ಗೆ ನಿನ್ನೆ ಸಾಯಂಕಾಲ ಪ್ರಕಾಶ ಎನ್ನುವ ವ್ಯಕ್ತಿ ಬಂದು ಹಣವನ್ನು ಕೇಳಿದ್ದಾನೆ. ಬೇಕರಿಯ ಮಾಲಿಕ ಇಲ್ಲ ಅಂತ ಹೇಳಿದಾಗ ರಾತ್ರಿ ಹೊತ್ತು ಮನೆಗೆ ಬಂದು ಚಾಕು ತೋರಿಸಿ ಜೀವ ಬೆದರಿಕೆ ಹಾಕಿದ್ದಾನೆ. ಮತ್ತೆ ಬೆಳಿಗ್ಗೆ ಬಂದು ಕಾಂಡಿಮೆಂಟ್ಸ್ ನ ಗ್ಲಾಸನ್ನು ಒಡೆದು ಹೊಡೆದು ಹಾಕಿ ವಿಕೃತಿ ಮೆರೆದಿದ್ದಾರೆ.

ಉದ್ಯಮಿ ಉಮೇಶ್ ಶೆಟ್ಟಿ ರವರ ನೇತೃತ್ವದಲ್ಲಿ ಅನ್ನಪೂರ್ಣೇಶ್ವರಿ ನಗರ ಮತ್ತು ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಗೆ ಘಟನೆ ಖಂಡಿಸಿ ಆರೋಪಿಗಳಿಗೆ ಶಿಕ್ಷೆ ಆಗುವಂತೆ ಆಗ್ರಹಿಸಿದ್ದಾರೆ.24 ಗಂಟೆಯ ಒಳಗಾಗಿ 2 ಠಾಣೆಯ ಇನ್ಸ್ಪೆಕ್ಟರ್ಗಳಾದ ರಾಮಮೂರ್ತಿ ಮತ್ತು ಲೋಹಿತ್ ರವರು ಆ ಆರೋಪಿಯನ್ನು ಬಂದಿಸಿ ಹೆಡೆಮುರಿ ಕಟ್ಟಿ FIR ದಾಖಲಿಸಿದ್ದಾರೆ.

ಬೆಂಗಳೂರಿನಲ್ಲಿ ಯಾವುದೇ ಬೇಕರಿ ಕಾಂಡಿಮೆಂಟ್ಸ್ ಮತ್ತು ಕ್ಯಾಂಟೀನ್ ಹಾಗೂ ಸಣ್ಣ ವ್ಯಾಪಾರಿಗಳು ಭಯ ಪಡುವ ಅವಶ್ಯಕತೆ ಇಲ್ಲ, ಮುಂದಿನ ದಿನಗಳಲ್ಲಿ ವ್ಯಾಪರಸ್ತರಿಗೆ ಯಾವುದೇ ತೊಂದರೆ(ಅಹಿತಕರ ಘಟನೆ) ಆದರೆ ಆರೋಪಿ ಗಳಿಗೆ ತಕ್ಕ ಶಿಕ್ಷೆ ಯನ್ನು ಕೊಡಿಸುವಲ್ಲಿ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುತ್ತೇವೆ ಎಂದರು.

ವರದಿ ಪ್ರಜಾ ಶಕ್ತಿ…